ಬೆಂಗಳೂರು: ಕೃಷ್ಣ ಭೈರೇಗೌಡನಿಗೆ ಧೈರ್ಯ ಇಲ್ಲ, ಅದಕ್ಕೆ ಚುನಾವಣೆಗೆ ನಿಂತಿಲ್ಲ, ಓಡು ಮಗ ಓಡು ಅಂತಾ ಎಲ್ಲರು ಓಡಿ ಹೋಗಿದ್ದಾರೆ ಎಂದು ವಿಪಕ್ಷ ನಾಯಕ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಿಮ್ಮಗೆ ಅಷ್ಟೋಂದು ಟ್ಯಾಲೆಂಟ್ ಇರೋರು ಆಗಿದ್ರೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಅಲ್ಲಿ ಕೇಂದ್ರಕ್ಕೆ ಪ್ರಶ್ನೆ ಮಾಡಬೇಕಿತ್ತು, ನಿಮಗೆ ನಿಮಗೆ ಧೈರ್ಯ ಇಲ್ಲ ಎಂದು ಕೃಷ್ಣ ಭೈರೇಗೌಡನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಕಾಮಾಲೆ ಕಾಂಗ್ರೆಸ್ ಕಣ್ಣು ತೆರೆಸುವ ಕೆಲಸವನ್ನು ಮಾಧ್ಯಮಗಳು ಮಾಡಿವೆ. ರಾಜ್ಯದ 508 ಕೆರೆಗಳಲ್ಲಿ ಒಂದು ಹನಿ ನೀರಿಲ್ಲ. ನಿಮಗೆ ಮಾನ ಮರ್ಯಾದೆ ಇದ್ದರೆ, ನಿಮ್ಮ ಯೋಗ್ಯತೆಗೆ ಅವತ್ತು ಬರ ಘೋಷಣೆಗೆ ಯಾಕೆ ಮಾಡಿಲ್ಲ. ಜುಲೈ ನಲ್ಲೇ ನೀವು ಘೋಷಣೆ ಮಾಡಿದ್ರೆ, ಕೇಂದ್ರದ ಅಧ್ಯಯನ ತಂಡ ರಾಜ್ಯಕ್ಕೆ ಬರ್ತಿತ್ತು ನೀವೇ ವಿಳಂಬ ಮಾಡಿ ಕೇಂದ್ರದ ಮೇಲೆ ಆರೋಪ ಮಾಡುದ್ರೆ ಹೇಗೆ ಎಂದರು.
ದೆಹಲಿಯಲ್ಲಿರುವ ಕೈ ನಾಯಕರಿಗೆ ಸಾಮರ್ಥ್ಯ ಇಲ್ಲ
ನಿಮಗೆ ಈ ರೀತಿಯಲ್ಲಿ ಹೇಳೋಕೆ ನಾಚಿಕೆ ಆಗಲ್ವಾ..?. ದೆಹಲಿಯಲ್ಲಿರುವ ಕೈ ನಾಯಕರಿಗೆ ಸಾಮರ್ಥ್ಯ ಇಲ್ಲ. ಅದಕ್ಕಾಗಿ ನಿರ್ಮಲಾ ಸೀತಾರಾಮನ್ ಬಂದು ಇಲ್ಲಿ ಉತ್ತರ ಕೊಡಬೇಕಂತೆ.ಓಡು ಮಗ ಓಡು ಅಂತಾ ಎಲ್ಲರು ಓಡಿ ಹೋಗಿದ್ದಾರೆ ಅಂತಾ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.