ಶಿವಮೊಗ್ಗ: ಸ್ವಾಭಿಮಾನಿ, ಸ್ವಾಭಿಮಾನಿ ಎಂದವರು ಈಗ ಬಿಜೆಪಿಗೆ ಶರಣಾಗಿದ್ದಾರೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಲೇವಡಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸುಮಲತಾ ಬಿಜೆಪಿಗೆ ಶರಣಾಗಿದ್ದಾರೆ.ಅವರ ಶರಣಾಗಿ ಹೋಗಿರುವುದು ಬಹಳ ಬೇಜಾರಾಗಿದೆ.ಸ್ವಾಭಿಮಾನಿ, ಸ್ವಾಭಿಮಾನಿ ಎಂದವರು ಈಗ ಬಿಜೆಪಿಗೆ ಶರಣಾಗಿದ್ದಾರೆ.ಭ್ರಷ್ಟಾಚಾರ ಮಾಡಿದವರು ಬಿಜೆಪಿಗೆ ಹೋದ ತಕ್ಷಣ ಪವಿತ್ರರಾಗುತ್ತಾರೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 20 ಸೀಟು ನಾವು ಗ್ಯಾರಂಟಿ ಗೆಲ್ಲುತ್ತೇವೆ.ದೇಶದಲ್ಲಿ ಬಿಜೆಪಿಗೆ 240 ಸೀಟು ಬರುತ್ತೆ ಅಷ್ಟೇ ಎಂದರು.