ಶಿವಮೊಗ್ಗ : ಬೆಂಗಳೂರಿನ ಕುಂದಲಹಳ್ಳಿಯಲ್ಲಿ ನಡೆದ ರಾಮೇಶ್ವರಂ ಕೆಫೆ ಸ್ಫೋಟ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತನನ್ನು NIA ವಶಕ್ಕೆ ಪಡೆದಿದೆ.
ಬಿಜೆಪಿ ಕಾರ್ಯಕರ್ತ ಸಾಯಿಪ್ರಸಾದ್ನನ್ನು ಎನ್ಐಎ ಅಧಿಕಾರಿಗಳು ವಿಚಾರಣೆಗೆ ಕರೆದೊಯ್ದಿದ್ದಾರೆ. ಈ ಮೂಲಕ ತೀವ್ರ ಕುತೂಹಲ ಮೂಡಿಸಿದೆ. ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನ ಎನ್ಐಎ ವಶಕ್ಕೆ ಪಡೆದಿದೆ.
ಇನ್ನು ಇದಕ್ಕೆ ಸಂಬಂಧಿಸಿದಂತೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಮುಖಂಡನ ಬಂಧನ ಅಚ್ಚರಿ ಮೂಡಿಸಿದೆ. ಯಾರೇ ಆಗಿರಲಿ ಅವರನ್ನು ಗುಂಡಿಟ್ಟು ಹೊಡೆಯಿರಿ. ಅವನು ಬಿಜೆಪಿಯೇ ಆಗಿರಲಿ, ಕಾಂಗ್ರೆಸ್ಸೇ ಆಗಿರಲಿ ಡಂ ಅನ್ನಿಸಬಿಡಬೇಕು ಎಂದು ತಿಳಿಸಿದ್ದಾರೆ.
ಬಿಜೆಪಿಗೆ 240 ಸೀಟು ಬರುತ್ತೆ ಅಷ್ಟೇ
ಸ್ವಾಭಿಮಾನಿ, ಸ್ವಾಭಿಮಾನಿ ಎಂದವರು ಈಗ ಬಿಜೆಪಿಗೆ ಶರಣಾಗಿದ್ದಾರೆ. ಸುಮಲತಾ ಬಿಜೆಪಿಗೆ ಶರಣಾಗಿದ್ದಾರೆ. ಅವರ ಶರಣಾಗಿ ಹೋಗಿರುವುದು ಬಹಳ ಬೇಜಾರಾಗಿದೆ. ಭ್ರಷ್ಟಾಚಾರ ಮಾಡಿದವರು ಬಿಜೆಪಿಗೆ ಹೋದ ತಕ್ಷಣ ಪವಿತ್ರರಾಗುತ್ತಾರೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ 20 ಸೀಟು ನಾವು ಗ್ಯಾರಂಟಿ ಗೆಲ್ಲುತ್ತೇವೆ. ದೇಶದಲ್ಲಿ ಬಿಜೆಪಿಗೆ 240 ಸೀಟು ಬರುತ್ತೆ ಅಷ್ಟೇ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಲೇವಡಿ ಮಾಡಿದ್ದಾರೆ.