Monday, May 20, 2024

ಕನಕಪುರ ಬಂಡೆ ಕರಗುತ್ತದೆ : ಅಶ್ವತ್ಥ ನಾರಾಯಣ್

ಬೆಂಗಳೂರು : ಕನಕಪುರ ಬಂಡೆ ಕರಗುತ್ತದೆ. ಡಾ.ಸಿ.ಎನ್. ಮಂಜುನಾಥ್ ಅಂತವರು ಗೆಲ್ಲಬೇಕಿದೆ ಎಂದು ಡಿ.ಕೆ. ಬ್ರದರ್ಸ್ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ವಾಗ್ದಾಳಿ  ನಡೆಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ಬಲ ಇದ್ದು ಏನು ಮಾಡ್ತಾ ಇದ್ದಾರೆ..? ಕುಕ್ಕರ್ ಕೂಗ್ತಾ ಇದೆ, ಸೀರೆ ಹಂಚಿಕೆ ಆಗ್ತಾ ಇದೆ. ಮುಖಂಡರಿಗೆ ಹಣ ಕೊಡ್ತಾ ಇದ್ದಾರೆ ಎಂದು ಆರೋಪ ಮಾಡಿದರು.

ಇಂದು ಯಾವ ರೀತಿ ಬೆಂಗಳೂರು ಗ್ರಾಮಾಂತರ ಗೆಲ್ಲಬೇಕು ಅಂತ ಚರ್ಚೆ ಆಗಿದೆ. ಸಾಕಷ್ಟು ಸಲಹೆಗಳು ಬಂದಿವೆ. ಎಲ್ಲವನ್ನೂ ಚರ್ಚೆ ಮಾಡಲಾಗಿದೆ. ಪ್ರವಾಸದ ಪಟ್ಟಿ ಹೇಗಿರಬೇಕು? ಎಲ್ಲೆಲ್ಲಿ ಪ್ರವಾಸ ಮಾಡಬೇಕು ಅಂತ ಚರ್ಚೆ ಆಗಿದೆ. ಇದು ದೇಶ, ಮೋದಿ ಚುನಾವಣೆ. ಇದು ಸಿದ್ದರಾಮಯ್ಯ, ಡಿ.ಕೆ. ಸುರೇಶ್, ಡಿ.ಕೆ. ಶಿವಕುಮಾರ್ ಚುನಾವಣೆ ಅಲ್ಲ. ಅವರಿಗೆ ಮತ ಹಾಕಿ ಏನೂ ಪ್ರಯೋಜನ ಇಲ್ಲ ಎಂದು ಕುಟುಕಿದರು.

ಜನರ ಹೃದಯ ನನ್ನನ್ನ ಗೆಲ್ಲಿಸಲು ಮಿಡಿಯುತ್ತಿದೆ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಮಾತನಾಡಿ, ಪ್ರವಾಸ ಹಾಗೂ ಪ್ರೋಗ್ರಾಂ ದಿನಾಂಕ ನಿಗದಿ ಮಾಡಿದ್ದೇವೆ. ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡ್ತಿದ್ದೇವೆ. ಎರಡು ದಿನ ಒಂದು ವಿಧಾನಸಭಾ ಕ್ಷೇತ್ರ ಕವರ್ ಮಾಡುವ ಬಗ್ಗೆ ಚರ್ಚೆ ಮಾಡಲಾಯಿತು. ಬೆಂಗಳೂರು ಗ್ರಾಮಾಂತರ ಜನರ ಹೃದಯ ಡಾ.ಸಿ.ಎನ್. ಮಂಜುನಾಥ್ ಅವರನ್ನ ಗೆಲ್ಲಿಸಲು ಮಿಡಿಯುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES