Sunday, May 12, 2024

ಗೀತಕ್ಕನ ಬಗ್ಗೆ ಮಾತಾಡುವಾಗ ಹುಷಾರ್ ಆಗಿ ಇರಬೇಕು: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ಗೀತಕ್ಕನ ಬಗ್ಗೆ ಮಾತಾಡುವಾಗ ಹುಷಾರ್ ಆಗಿ ಇರಬೇಕು.ರಾಘವೇಂದ್ರ ಅವರೇ ನಿಮ್ಮನ್ನ ಜನರೇ ಧಿಕ್ಕರಿಸುತ್ತಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ನಿಮ್ಮ ಸ್ವಾರ್ಥಕ್ಕಾಗಿ ಕಮಲದ ಆಕಾರದಲ್ಲಿ ವಿಮಾನ ನಿಲ್ದಾಣ ಮಾಡಿದ್ದೀರಾ.?ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಮೋಸ ಮಾಡಿದ್ದಾರೆ.ರಾಜ್ಯದ ಜನರ ಬಳಿ ಮತ ಕೇಳಲು ಬಿಜೆಪಿ ಅವರಿಗೆ ನಾಚಿಕೆ ಆಗಬೇಕು.ಗೀತಾ ಶಿವರಾಜ್ ಕುಮಾರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.ನಿಮ್ಮದೇ ಪಕ್ಷದವರು ನಿಮಗೆ ಕ್ಯಾಕರಿಸಿ ಉಗಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಈಶ್ವರಪ್ಪ ಹೇಳುತ್ತಿರುವ ಎಲ್ಲಾ ಮಾತು ಸತ್ಯ

ಈಶ್ವರಪ್ಪ ಹೇಳುತ್ತಿರುವ ಎಲ್ಲಾ ಮಾತುಗಳು ಸತ್ಯ.ಬೆಳೆಸಿದವರನ್ನು ಒದ್ದು ನೀವು ಮೇಲೆ ಬಂದದಿರೋದು ಎಂದರು.

ರಾಘವೇಂದ್ರ ಅವರೇ ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ ಎಂದು ಕಿಡಿಕಾರಿದ್ದಾರೆ.

ಏ.15 ರಂದು ನಾಮಪತ್ರ ಸಲ್ಲಿಸುತ್ತಿದ್ದೇವೆ

ಸಿದ್ದರಾಮಯ್ಯ,ಡಿ.ಕೆ ಶಿವಕುಮಾರ್ ಶಿವಮೊಗ್ಗಕ್ಕೆ ಬರುತ್ತಾರೆ.ಎಲ್ಲಾ ವಿಧಾನ ಸಭಾ ಕ್ಷೇತ್ರದಲ್ಲಿ ಲೀಡ್ ತಗೆದುಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆರಗ ಜ್ಞಾನೇಂದ್ರ 420 ಗ್ಯಾರಂಟಿ ಇದೆ ಎಂದಿದ್ದಾರೆ

ಆರಗ ಜ್ಞಾನೇಂದ್ರ ದೊಡ್ಡ ನೀವು ದೊಡ್ಡ 420.ತಲೆಯಲ್ಲಿ ಅರಿವು ಇಟ್ಟುಕೊಳ್ಳಿ.ಅಡಿಕೆ ಸಂಶೋಧನಾ ಕೇಂದ್ರ ಮಾಡುತ್ತೇವೆ ಅಂದವರಿಗೆ 420 ಅನ್ನಿ ಹಠ,ಛಲದಿಂದ ಚುನಾವಣೆ ಮಾಡುತ್ತಿದ್ದೇವೆ.ಗೀತಕ್ಕನನ್ನು ಜನರ ಬಳಿ ಕರೆದುಕೊಂಡು ಹೋಗುತ್ತಿದ್ದೇವೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದೇವೆ ಜನ ಉತ್ತಮ ಬೆಂಬಲ ನೀಡುತ್ತಿದ್ದಾರೆ ಎಂದರು.

ದೇಶದ ಜನರು ಬಿಜೆಪಿಯನ್ನು ಸೋಲಿಸುತ್ತಾರೆ

ವಿರೋಧ ಪಕ್ಷಗಳು ಹಗುರವಾಗಿ ಮಾತನಾಡಬಹುದು ಅದಕ್ಕೆ ಮತದಾರರು ಉತ್ತರ ಕೊಡುತ್ತಾರೆ.ಯಾರೇ ಡಮ್ಮಿ ಎನ್ನಲಿ ಅದು ಅವರಿಗೆ ಅನ್ವಯ ಆಗಲ್ಲ.ಗ್ಯಾರಂಟಿ ಯೋಜನೆ ಮೂಲಕ ಹೆಚ್ಚಿನ ಬಹುಮತ ಪಡೆಯುತ್ತೇವೆ  ದೇಶದ ಜನರು ಬಿಜೆಪಿಯನ್ನು ಸೋಲಿಸುತ್ತಾರೆ ಎಂದರು.

ರಾಘವೇಂದ್ರ ಸುಳ್ಳಿನ ಸರದಾರ

ಸ್ಟಾರ್ ಕ್ಯಾಂಪೇನರ್ ಆಗಿ ಕೆಲಸ ಮಾಡುತ್ತಿದ್ದೇನೆ.ಸಂಸದರಿಗೆ ಜನರ ಬಳಿಗೆ ಹೋಗಲು ಧೈರ್ಯ ಇಲ್ಲ ರಾಘವೇಂದ್ರ ನೋಡಿ ಅಳಬೇಕೋ,ನಗಬೇಕೋ ಗೊತ್ತಾಗುತ್ತಿಲ್ಲ ಸಂಸದರಾಗಿ ಏನು ಮಾಡಿದ್ದೀರಾ? ರಾಘವೇಂದ್ರ ಸುಳ್ಳಿನ ಸರದಾರ? ಸುಳ್ಳಿನ ಸರದಾರ ಅವಾರ್ಡ್ ಕೊಡಬೇಕು.

ಪಂಪ್ ಸೆಟ್ ರಾಜ್ಯದ ಜನರಿಗೆ ಯಾರು ಕೊಟ್ಟಿದ್ದು ಅಂತ ಹೇಳಬೇಕು.ಸಂಸದ ರಾಘವೇಂದ್ರ ತಮ್ಮದೆ ಸಮಾವೇಶದಲ್ಲಿ ಹೇಳಲಿ.ದೇಶ ಉಳಿದಿರುವುದು ಕಾಂಗ್ರೆಸ್ ನಿಂದಬಿಜೆಪಿ ಅವರು ದೇಶವನ್ನು ಒಡೆದು ಆಳುತ್ತಿದ್ದೀರಾ.ರಾಮ ಜಪವನ್ನೆ ಈಗ ಬಿಜೆಪಿ ಅವರು ಬಿಟ್ಟಿದ್ದಾರೆ.ಶರಾವತಿ ಸಂತ್ರಸ್ತರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್ ಅನ್ನುತ್ತಾರೆ.ಶರಾವತಿ ಸಂತ್ರಸ್ತರಿಗೆ ಜೀವ ಕೊಟ್ಟಿದ್ದು ಕಾಗೋಡು ತಿಮ್ಮಪ್ಪ ಎಂದರು.

ಗೀತಕ್ಕನ ಬಗ್ಗೆ ಮಾತಾಡುವಾಗ ಹುಷಾರ್ ಆಗಿ ಇರಬೇಕು

ಇನ್ನುಮುಂದೆ ಅನ್ನಬೇಕಾಗುತ್ತೆ ಜನರ ಬಳಿ ಹೋಗಿ ಮತ ಕೇಳಲು ನಿಮಗೆ ಯೋಗ್ಯತೆ ಇಲ್ಲ ಗೀತಕ್ಕ ನಿಮ್ಮನ್ನ ಹೀನಾಯವಾಗಿ ಸೋಲಿಸುತ್ತಾರೆ ನೋಡಿ.ಗೀತಕ್ಕನ ಬಗ್ಗೆ ಮಾತಾಡುವಾಗ ಹುಷಾರ್ ಆಗಿ ಇರಬೇಕು.ಯಡಿಯೂರಪ್ಪ ನನಗೆ ನೆಂಟರು,ಬಿಗರು ಅಲ್ಲ.ಕೆಜೆಪಿ ಕಟ್ಟಿದ್ದಾಗ ಯಡಿಯೂರಪ್ಪ ಅವರನ್ನು ಉಗದಿದ್ದು ಯಾರು ? ಬಿಜೆಪಿ 26 ಗೆದ್ದಿದ್ದು ನರೇಂದ್ರ ಮೋದಿಯವರ ಹೆಸರಲ್ಲಿ ಜೋತಿಷ್ಯ ಕೇಳಿ ನಾಮಪತ್ರ ಸಲ್ಲಿಸಲ್ಲ.ನಮಗೆ ಮತದಾರರೇ ಜೋತಿಷ್ಯರು ಠೇವಣಿ ಹಣವನ್ನು ಅನೇಕ ಮಹಿಳೆಯರು ಕಟ್ಟುತ್ತೇವೆ ಅಂದಿದ್ದಾರೆ ಎಂದರು.

RELATED ARTICLES

Related Articles

TRENDING ARTICLES