Thursday, May 16, 2024

ಅವ್ರು ‘ಚೌಟ’ ಇವ್ರು ‘ಕೋಟ’ ಕಾಂಗ್ರೆಸ್​ಗೆ ‘ಗೂಟ’ : ಶಾಸಕ ಯತ್ನಾಳ್

ಉಡುಪಿ : ಕರಾವಳಿ ಹಿಂದುತ್ವ ನೋಡಲು ಬಂದಿದ್ದೇನೆ. ಉತ್ತರ ಕರ್ನಾಟಕದಲ್ಲಿ ಈಗ ಹಿಂದುತ್ವ ಉಗಮ ಆಗುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳದರು.

ಉಡುಪಿಯಲ್ಲಿ ಮಾತನಾಡಿದ ಅವರು, ಅವರು ‘ಚೌಟ’ (ಬ್ರಿಜೇಶ್ ಚೌಟ) ಇವರು ‘ಕೋಟ’ (ಕೋಟಾ ಶ್ರೀನಿವಾಸ್ ಪೂಜಾರಿ) ಕಾಂಗ್ರೆಸ್ ನಾಯರಿಗೆ ‘ಗೂಟ’ ಗ್ಯಾರಂಟಿ ಎಂದು ಕುಟುಕಿದರು.

ಈ ಬಾರಿಯ ಚುನಾವಣೆ ಪ್ರಧಾನಿ ಮೋದಿ ಚುನಾವಣೆ ಅಲ್ಲ, ಸನಾತನ ಧರ್ಮ ಉಳಿಸುವ ಚುನಾವಣೆ. ಸಿದ್ದರಾಮಯ್ಯ ದಾಟಿಯನ್ನು ಅಣಕಿಸಿದ ಯತ್ನಾಳ್, ತಿಹಾರ್ ಜೈಲಿಂದ ಬಂದವ 15 ಲಕ್ಷ ಕೇಳ್ತಾನೆ,  ನಿನ್ನ ಆಸ್ತಿ ಮಾರಿದ್ರೆ ಕೊಡಬಹುದು. ಯಾರನ್ನು ಬಿಡಲ್ಲ, ನಿಮ್ಮನ್ನೂ ಬಿಡಲ್ಲ ಎಂದು ಡಿಶಿಗೆ ಟಾಂಗ್ ಕೊಟ್ಟರು.

ಇದು 10 ವರ್ಷದ ಟ್ರೈಲರ್, ಮುಂದಿನ ಪಿಚ್ಚರ್ ಬಾಕಿ ಹೇ.. ಕೇಜ್ರಿವಾಲ್ ಇಲ್ಲ, ಡಿಂಗ್ರಿವಾಲನೂ.. ಎಲ್ಲರೂ ಜೈಲಿಗೆ ಹೋಗ್ತಾನೆ. ಮಗ, ತಂಗಿ, ಅಣ್ಣನ ಮಗನಿಗೆ ಟಿಕೆಟ್ ಅಂತ ಕಚ್ಚಾಡುತ್ತಿದ್ದಾರೆ. ಪರಿವಾರ ವಾದ 2024ಕ್ಕೆ ಮೋದಿ ಆಯ್ಕೆ ಆದ್ರೆ ಎಲ್ಲಾ ನಿರ್ನಾಮ ಆಗುತ್ತದೆ ಎಂದು ಹೇಳಿದರು.

ಸಿದ್ದರಾಮಯ್ಯ ನಕ್ಕರೆ ರಾವಣ ನಕ್ಕಂಗಾಗುತ್ತೆ

ರಾಹುಲ್ ವರಿಜಿನಾಲಿಟಿ ಪ್ರಶ್ನಿಸಿದ ಯತ್ನಾಳ್, ರಾಹುಲ್ ದೇಗುಲ, ಮಸೀದಿ, ಚರ್ಚ್​ಗೆ ಹೋದಾಗ ಬದಲಾಗ್ತಾನೆ. ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗ್ತೀನಿ ಅಂತಾನೆ. ಸಿದ್ದುಗೆ ಮುಂದಿನ ಜನ್ಮ ಕೊಡೋಕೆ ದೇವರಿಗೆ ತಲೆ ಕೆಟ್ಟಿದ್ಯಾ..? ಮುಂದಿನ ಜನ್ಮದಲ್ಲೇನು ಈಗಲೇ ಮುಸ್ಲಿಂ ಆಗಿಬಿಡು. ಅಖಿಲ ಭಾರತ ವೀರಶೈವ ಮಹಾಸಭಾ ಮೂರು ಜನರ ಕಂಪನಿ. ಸಿಎಂಗೆ ಸನ್ಮಾನ ಸಂದರ್ಭದ ವೇಳೆ ಸತ್ತಮೇಲೆ ಲಿಂಗಾಯತರ ಹೆಣ ಕೂರಿಸಿದಂಗೆ ಕೂರಿಸಿ ಹೂವು ಹಾಕಿದ್ರು. ಸಿದ್ದರಾಮಯ್ಯ ನಕ್ಕರೆ ರಾವಣ ನಕ್ಕಂಗಾಗುತ್ತೆ. ಸಿದ್ದರಾಮಯ್ಯ ಇಳಿದರೆ ಕಾಂಗ್ರೆಸ್ ಡುಬುಕ್ ಅಂತ ಬಿದ್ದು ಬಿಡುತ್ತೆ ಎಂದು ಯತ್ನಾಳ್ ಲೇವಡಿ ಮಾಡಿದರು.

RELATED ARTICLES

Related Articles

TRENDING ARTICLES