Sunday, May 19, 2024

ಹೇ.. ಬಿಡ್ರಯ್ಯ, ಮಾಧುಸ್ವಾಮಿ ಮಾಧುಸ್ವಾಮಿ ಅಂತೀರಲ್ಲ : ಸೋಮಣ್ಣ ಗರಂ

ಬೆಂಗಳೂರು : ಹೇ.. ಬಿಡ್ರಯ್ಯ, ಮಾಧುಸ್ವಾಮಿ ಮಾಧುಸ್ವಾಮಿ ಅಂತೀರಲ್ಲ. ಮಾದಪ್ಪನೇ ನನ್ನ ಜೊತೆ ಇದ್ದಾನೆ, ಸಿದ್ದಗಂಗಾ ಸ್ವಾಮಿಯೇ ನನ್ನ ಜೊತೆ ಇದಾರೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಗರಂ ಆದರು.

ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಅಸಮಾಧಾನದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿ, ಮಾಧುಸ್ವಾಮಿ ಯಾಕಪ್ಪ? ಪ್ರಚಾರಕ್ಕೆ ಅವರು ಬರಲಿ ಬಿಡಲಿ, ಯಾರಿಗೂ ಬನ್ನಿ ಅಂತ ಬಲವಂತ ಮಾಡಲ್ಲ. ನಾನು ನಾಮಪತ್ರ ಸಲ್ಲಿಕೆ ಮಾಡ್ತಿದ್ದೇನೆ ಎಂದು ಹೇಳಿದರು.

ಒಬ್ಬ ಮಾಧುಸ್ವಾಮಿ ಮುನಿಸಿಕೊಂಡಿದ್ದಾರೆ. ಆದರೆ, ಮಾದಪ್ಪನೇ ನಮ್ಮ ಜೊತೆಯಲ್ಲಿ ಇದ್ದಾನೆ. ಅವರೂ ಮುಂದೊಂದು ದಿನ ಬರ್ತಾರೆ. ನಾಳೆ ಮಧ್ಯಾಹ್ನ 1.30ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ಮಾಜಿ ಸಿಎಂ ಬಿಎಸ್. ಯಡಿಯೂರಪ್ಪ, ಹೆಚ್.ಡಿ ಕುಮಾರಸ್ವಾಮಿ, ವಿಪಕ್ಷ ನಾಯಕರ ಆರ್. ಅಶೋಕ್ ಬರ್ತಾರೆ ಎಂದು ತಿಳಿಸಿದರು.

ಅಮಿತ್ ಶಾ ಕ್ಷೇತ್ರ ಹೇಗಿದೆ ಅಂತ ಕೇಳಿದ್ರು

ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಯಿತು. ಸೋಮಣ್ಣ ಅವರೇ, ಕ್ಷೇತ್ರ ಹೇಗಿದೆ ಅಂತ ಕೇಳಿದ್ರು. ಚೆನ್ನಾಗಿದೆ ಸರ್ ಅಂದೆ. ಅಮಿತ್ ಶಾ ನಮ್ಮ ಪರಮೋಚ್ಛ ನಾಯಕರು. ಅಮಿತ್ ಶಾ ಅವರು ಒಂದಷ್ಟು ಸೂಚನೆ ಕೊಟ್ಟಿದ್ದಾರೆ. ಅಮಿತ್ ಶಾ ಅವರು ಚುನಾವಣೆ ಮಾಡುವಾಗ ಆದ್ಯತೆ ಏನು? ರಾಜಕಾರಣ ನಿಂತ ನೀರಲ್ಲ. ಕೆಲ ಪ್ರಮುಖ ಅಸ್ತ್ರ ಚಾಲನೆಗೆ ತೆಗೆದುಕೊಂಡ್ರೆ ಒಳ್ಳೆಯದಾಗಲಿದೆ. ಇದು ಶುಭ ಸೂಚನೆ. ನಮ್ಮ ಪರಮೋಚ್ಚ ನಾಯಕರಲ್ಲಿ ಅಮಿತ್ ಶಾ ಒಬ್ಬರು ಎಂದು ಸೋಮಣ್ಣ ಹೇಳಿದರು.

RELATED ARTICLES

Related Articles

TRENDING ARTICLES