ಬಾಗಲಕೋಟೆ: ತೋಟಕ್ಕೆ ಮೇವು ತರಲು ಹೊಗಿದ್ದ ವೇಳೆ ಕೊಡಲಿಯಿಂದ ಕೊಚ್ಚಿ ಅಣ್ಣನನ್ನೇ ತಮ್ಮ ಕೊಲೆಗೈದಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಜಾಲಿಬೇರ ಗ್ರಾಮದಲ್ಲಿ ನಡೆದಿದೆ.
ಉತ್ತಮ ಯಾದವ್ (55) ಕೊಲೆಯಾದ ವ್ಯಕ್ತಿ. ಆನಂದ ಯಾದವ್ ಕೊಲೆ ಆರೋಪಿ.
ಘಟನೆಯ ವಿವರ
ಜಮೀನು ವಿಚಾರಕ್ಕೆ ಸಹೋದರನನ್ನೇ ವ್ಯಕ್ತಿ ಮಾಡಿದ್ದಾನೆ. ತೋಟದಲ್ಲಿ ಮೇವು ತರಲು ಹೋಗಿದ್ದಾಗ ಅಣ್ಣನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ ತಮ್ಮ ಕೊಂದಿದ್ದಾನೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.