Monday, May 20, 2024

ಈ ಚುನಾವಣೆ ಬಳಿಕ ಸರ್ಕಾರ ಬಿದ್ದು ಹೋಗುತ್ತೆ, ಎರಡು ಮಾತಿಲ್ಲ : ಭಗವಂತ ಖೂಬಾ ಭವಿಷ್ಯ

ಬೀದರ್ : ಈ ಲೋಕಸಭಾ ಚುನಾವಣೆ ಬಳಿಕ ಶಾಸಕರ ಅಸಮಾಧಾನ ಸ್ಪೋಟಗೊಂಡು ಕಾಂಗ್ರೆಸ್​ ಸರ್ಕಾರ ಬಿದ್ದು ಹೋಗುತ್ತದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಭವಿಷ್ಯ ನುಡಿದರು.

ಲೋಕಸಭೆ ಚುನಾವಣೆ ಬಳಿಕ ಸಿಎಂ ಬದಲಾವಣೆ ವಿಚಾರವಾಗಿ ಬೀದರ್​ನಲ್ಲಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ನಾವು 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಡಿಸಿದರು.

ಕಾಂಗ್ರೆಸ್ ಪಕ್ಷ ಶೂನ್ಯ ಸಾಧನೆ ಆಗುತ್ತದೆ. ಈಗಾಗಲೇ ಎಲ್ಲಾ ಶಾಸಕರಿಗೂ ಅಸಮಾಧಾನ ಇದೆ. ಈ ಚುನಾವಣೆ ಬಳಿಕ ಶಾಸಕರ ಅಸಮಾಧಾನ ಸ್ಪೋಟ ಆಗುತ್ತದೆ. ಅವರಿಂದಲೇ ಈ ಸರ್ಕಾರ ಬಿದ್ದು ಹೋಗುತ್ತದೆ. ಚುನಾವಣೆ ಬಳಿಕ ಸರ್ಕಾರ ಬೀಳುವುದರಲ್ಲಿ ಎರಡು ಮಾತಿಲ್ಲ ಎಂದರು ಕುಟುಕಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವ ಅವಶ್ಯಕತೆನೇ ಬರಲ್ಲ. ಈ ಸರ್ಕಾರ ಪತನ ಹಾಗೇ ಆಗುತ್ತದೆ. ನಾವು ಆಪರೇಷನ್ ಕಮಲ ಮಾಡುವ ಅವಶ್ಯಕತೆ ಇಲ್ಲ. ಸ್ವತ ಕಾಂಗ್ರೆಸ್ ಶಾಸಕರೇ ಹೊರಗಡೆ ಬರುತ್ತಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರದ್ದು ಒಂದು ಕೆಟ್ಟ ಚಾಳಿ

ಕೇಂದ್ರ ಸರ್ಕಾರದಿಂದ ನಯಾ ಪೈಸಾ ಯಾವುದೇ ರಾಜ್ಯಕ್ಕೂ ಕೊಡುವುದು ಬಾಕಿ ಇಲ್ಲ. ಸಿಎಂ ಸಿದ್ದರಾಮಯ್ಯ ಅವರದ್ದು ಒಂದು ಕೆಟ್ಟ ಚಾಳಿ. ತಾವು ಬಚಾವ್ ಆಗಲು ಇಂತಹ ಕೆಲಸ ಮಾಡುತ್ತಾರೆ. ಸುಪ್ರಿಂ ಕೋರ್ಟ್ ಮೊನ್ನೆ ಚಾಟಿ ಬೀಸಿದೆ. ಲೊಕಸಭೆ ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂಡಿಸುವಂತ ವ್ಯರ್ಥ ಪ್ರಯತ್ನ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಭಗವಂತ ಖೂಬಾ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES