Monday, May 20, 2024

ಯಾಕಪ್ಪ ಈ ನಾಟಕ ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಮೈಸೂರು: ಯಾಕಪ್ಪ ಈ ನಾಟಕ ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾವು 10 ಕೆಜಿ ಕೊಡ್ತೇವೆ ಎಂದಾಗ ಬಿಜೆಪಿಯವರು ಕೇಂದ್ರ ಆಹಾರ ಇಲಾಖೆಗೆ ಕೊಡದಂತೆ ಮಾಡಿದ್ದರು.ಐದು ಕೆಜಿ ಅಕ್ಕಿಯ ಬದಲು ಹಣ ಕೊಡಲು ನಾವು ತೀರ್ಮಾನ ಮಾಡಿದೆವು.
ನಾವು ಮಾಡಿರುವ ಎಲ್ಲಾ ಕಾರ್ಯಕ್ರಮಗಳು ಬಡವರಿಗಾಗಿ ಬಿಜೆಪಿಯಲ್ಲಿರುವ ಬಡವರಿಗೂ ಜಾರಿ ಮಾಡಿದ್ದೇವೆ.
ಬಿಜೆಪಿಯ ಹೆಣ್ಣು ಮಕ್ಕಳು ಬಸ್ಸಿನಲ್ಲಿ ಓಡಾಡುತ್ತಿಲ್ವಾ? ಎಂದರು.

ಅಚ್ಛೇ ದಿನ್ ಆಯೇಗಾ ಅಂದ್ರು ಒಳ್ಳೆ ದಿನಗಳು ಬಂದಿವೆ? 

ಮೋದಿಯವರು ದೇಶದಲ್ಲಿ ನಿರುದ್ಯೋಗ ಜಾಸ್ತಿ ಇದೆ.ಉದ್ಯೋಗ ಸೃಷ್ಟಿ ಮಾಡ್ತೇನೆ ಎಂದರು, ಬದಲಾಗಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಯಿತು. ಮೋದಿಯವರು ನುಡಿದಂತೆ ನಡೆದಿದ್ದಾರಾ?
ಅಚ್ಛೇ ದಿನ್ ಆಯೇಗಾ ಅಂದ್ರು ಒಳ್ಳೆ ದಿನಗಳು ಬಂದಿದ್ಯಾ.? ಅಕ್ಕಿ, ಡೀಸೆಲ್, ಗ್ಯಾಸ್ ಬೆಲೆ ಎಲ್ಲವು ಹೆಚ್ಚಾದವು.
ರೈತರ ಡಬಲ್ ಮಾಡ್ತೀವಿ ಅಂದ್ರು ಮಾಡಲಿಲ್ಲ.

ನನಗೆ 56ಇಂಚಿನ ಎದೆ ಇದೆ ಅಂದ್ರು
ಬಡವರ ಪರವಾದ ಮನಸ್ಸು ಇರಬೇಕೆಂದು ನಾನು ಮೋದಿಯವರಿಗೆ ಹೇಳಿದೆ.ಪೈಲ್ವಾನರಿಗು 56 ಇಂಚಿನ ಎದೆ ಇರುತ್ತೆ, ಆದ್ರೆ ಮಾತೃ ಹೃದಯ ಇರಬೇಕು.ಈ ಚುನಾವಣೆಯಲ್ಲಿ 28ಕ್ಕೆ 28ಗೆಲ್ತಿವಿ ಎಂದು ಬಿಜೆಪಿ ಜೆಡಿಎಸ್ ನವರು ಹೇಳ್ತಾರೆ.

ಬಿಜೆಪಿ ಒಂದು ಕೋಮುವಾದಿ ಪಕ್ಷ ನಾವು ಸೇರಲ್ಲ ಎಂದು ದೇವೇಗೌಡರು ಹೇಳಿದ್ರು.ನಾನು ಮುಂದಿನ ಜನ್ಮ ದಿನ ಇದ್ರೆ ಮುಸ್ಲಿಂ ಆಗಿ ಹುಟ್ಟುತಿನಿ ಎಂದ್ರು.ಗರ್ವಭಂಗ ಮಾಡ್ತೀನಿ ಎಂದ್ರು ನನಗೆ ಗರ್ವವೇ ಇಲ್ಲ.ಬಿಜೆಪಿ ಅಧಿಕಾರಕ್ಕೆ ಬಂದ್ರೆ ದೇಶ ಬಿಡ್ತೀನಿ ಅಂದ್ರು. ಈಗ ನನಗೂ ಮೋದಿಗೂ ಅವಿನಾಭಾವ ಸಂಬಂಧ ಅಂತಿದ್ದಾರೆ.
ಅವರ ಅಳಿಯ ಮಂಜುನಾಥ್ ರನ್ನ ಬಿಜೆಪಿಗೆ ಕಳಿಸಿದ್ದಾರೆ.ಈಗ ಬೇರೆ ಬೇರೆ ಆಗಿದ್ದಾರಾ.
ಯಾಕಪ್ಪ ಈ ನಾಟಕ ಎಂದ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES