Friday, May 17, 2024

ದೇಶ ಕಾಯಲು ಮೋದಿ,ಕಾವೇರಿ ಕಾಯಲು ಕುಮಾರಣ್ಣ ಬೇಕು: ಪ್ರತಾಪ್ ಸಿಂಹ

ಮಂಡ್ಯ: ದೇಶ ಕಾಯಲು ಮೋದಿ,ಕಾವೇರಿ ಕಾಯಲು ಕುಮಾರಣ್ಣ ಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. 

ನಾಗಮಂಗಲದಲ್ಲಿ ಭಾಷಣದಲ್ಲಿ ಮಾತನಾಡಿದ ಅವರು,ಮಂಡ್ಯದಲ್ಲಿ ಬಿಜೆಪಿ ಜೆಡಿಎಸ್‌ ಒಂದಾದರೆ ಗೆಲುವು ನಿಶ್ಚಿತ.ಪ್ರೀತಿ, ವಿಶ್ವಾಸದಿಂದ ಕುಮಾರಣ್ಣ ಕೇಂದ್ರ ಸಚಿವರನ್ನಾಗಿ ಮಾಡ್ತೀವಿ‌.ದೇಶದ ಭವಿಷ್ಯ‌ ನಿರ್ಧರಿಸುವ ಚುನಾವಣೆ ಇದು.ನರೇಂದ್ರ ಮೋದಿ ಅವರ ಪುನರಾಯ್ಕೆ ನಿಶ್ಚಿತ.ದೇಶ ಕಾಯಲು ಮೋದಿಜೀ, ಕಾವೇರಿ ಕಾಯಲು ಕುಮಾರಣ್ಣ ಬೇಕೇ ಬೇಕು ಎಂದರು.

ಕಾಂಗ್ರೆಸ್ ಕಾಲಿಟ್ಟ ಕೂಡಲೇ ರಾಜ್ಯಕ್ಕೆ ಬರ‌
ಬಿಎಸ್‌ವೈ, ಕುಮಾರಣ್ಣ ಸಿಎಂ ಆಗಿದ್ದಾಗ ಮಳೆ, ಬೆಳೆ ಚೆನ್ನಾಗಿತ್ತು.KRS ಬರಿದಾಗುವಾಗ ಸ್ಟಾಲೀನ್ ತಗಾದೆ ತೆಗೆಯಬೇಡಿ ಎನ್ನಲಿಲ್ಲ.ಆದರೆ ಚುನಾವಣೆಗಾಗಿ ಕೈ ಕೈ ಹಿಡಿದು ನಿಂತರು.ಇವತ್ತು ಕುಡಿಯುವ ನೀರಿಗೂ ಹೆಣಗಾಡುವ ಪರಿಸ್ಥಿತಿ ಇದೆ. ಗುತ್ತಿಗೆದಾರನಿಗೆ ಮತ ನೀಡಿದ್ರೆ ಕಾವೇರಿ ಉಳಿಯಲ್ಲ.ಕರುಣೆಯ ಕುಮಾರಣ್ಣನಿಗೆ ಮತ ನೀಡಿ ಎಂದು ಮತಯಾಚನೆ ಮಾಡಿದ್ದಾರು.

ಮಂಡ್ಯದ ಜನ ಸ್ವಾಭಿಮಾನಿಗಳು

ಅಸೆಂಬ್ಲಿಯಲ್ಲಿ ಜೆಡಿಎಸ್‌ ಎನ್ನುವ ಕಾರ್ಯಕರ್ತರು ಎಂಪಿ ಚುನಾವಣೆ ಬಂದಾಗ ಮೋದಿ ಪರ ನಿಲ್ತಾರೆ.
ಮಂಡ್ಯದವರು ಸ್ವಾಭಿಮಾನಗಳು.ಮಂಡ್ಯ ಮೈಸೂರಿಗೆ ಅವಿನಾಭಾವ ಸಂಬಂಧ ಇದೆ.ನಾವು ಬಿಜೆಪಿ ಕಾರ್ಯಕರ್ತರು ಕುಮಾರಣ್ಣನ ಬೆನ್ನಿಗೆ ನಿಲ್ಲುತ್ತೇವೆ ಎಂದರು.

KRS ಬರಿದಾಗುತ್ತದೆ ಎಚ್ಚರಿಕೆಯಿಂದ ಮತಚಲಾಯಿಸಿ

ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಮತ್ತೆ ಮಳೆ ಕೈ ಕೊಡುತ್ತದೆ.KRS ಬರಿದಾಗುತ್ತದೆ ಎಚ್ಚರಿಕೆಯಿಂದ ಮತಚಲಾಯಿಸಿ.ಶಿವರಾಮೇಗೌಡ ಸಂಸದರಾಗಿದ್ದಾಗ ಮಂಡ್ಯಕ್ಕೆ ಪಾಸ್‌ಪೋರ್ಟ್ ಸೇವಾ ಕೇಂದ್ರ ಬರಲು ಶ್ರಮಿಸಿದ್ದೆ ಎಂದರು.

ಮಂಡ್ಯಕ್ಕೂ ಒಳಿತಾಗಲೆಂದು ಬೆಂಗಳೂರು-ಮೈಸೂರು ಹೈವೆ ನಿರ್ಮಾಣ
ಕರ್ನಾಟಕವನ್ನ ಆಳುವುದು ಹಳೇ ಮೈಸೂರು ಈ ಬಾರಿಯೂ ನಮ್ಮ ಶಕ್ತಿ ಸಾಬೀತಾಗಬೇಕು.
ಕುಮಾರಣ್ಣ ಗೆದ್ದು ಬರಬೇಕು ಎಂದರು.

ಕಾವೇರಿ ಉಳಿಸಿಕೊಟ್ಟ ದೇವೇಗೌಡರ ಮಗ ಮಂಡ್ಯದಿಂದ ಸಂಸದರಾಗಬಾರದೆ?

ಮೈಸೂರಿನಲ್ಲಿ ನೆಲೆ‌ ಕಳೆದುಕೊಂಡ ಸಿದ್ದರಾಮಯ್ಯ ಬಾದಾಮಿಗೆ ಹೋಗಬಹುದು. ವಯನಾಡ್‌ನಿಂದ ರಾಹುಲ್ ಸಂಸದರಾಗಬಹುದು.ಆದರೆ ಕಾವೇರಿ ಉಳಿಸಿಕೊಟ್ಟ ದೇವೇಗೌಡರ ಮಗ ಮಂಡ್ಯದಿಂದ ಸಂಸದರಾಗಬಾರದ?
ಮಂಡ್ಯದ ಮಗನಾಗಿ ಕುಮಾರಣ್ಣ ಸ್ಪರ್ಧೆ ಮಾಡ್ತಾರೆ ಎಲ್ಲರೂ ಒಟ್ಟಾಗಿ ಕುಮಾರಣ್ಣನನ್ನು ಗೆಲ್ಲಿಸೋಣ ಎಂದರು.

RELATED ARTICLES

Related Articles

TRENDING ARTICLES