ಬೆಂಗಳೂರು: ಕಾಂಗ್ರೆಸ್ ಗೆಲ್ಲಬೇಕಲ್ಲ..? ಅದಕ್ಕೆ ನಾನು ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ ನಾವೆಲ್ಲರೂ ಸೇರಿ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡಬೇಕು ಎಂದು ಸಚಿವ ಕೆ.ಎಚ್ ಮುನಿಯಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಸಿ ವೇಣುಗೋಪಾಲ್, ಸುರ್ಜೇವಾಲಾ ನಮ್ಮ ಹೆಸರು ತೀರ್ಮಾನ ಮಾಡಿದ್ರು ಆದರೆ ನಮ್ಮಲ್ಲಿ ಒಮ್ಮತ ಅಭಿಪ್ರಾಯ ಬಾರದೇ ಕಾರಣ. ಅನಿವಾರ್ಯವಾಗಿ ಗೌತಮ್ ಅವರಿಗೆ ಕೊಟ್ಟಿದ್ದಾರೆ ಎಂದು ಟಿಕೆಟ್ ತಪ್ಪಿಸಿದ ವಿರೋಧಿ ಬಣದ ವಿರುದ್ಧ ಕೆ ಎಚ್ ಮುನಿಯಪ್ಪ ಅಸಮಾಧಾನ ಹೊರಹಾಕಿದ್ದರು.
ಟಿಕೆಟ್ ತಪ್ಪಿಸಿದ್ದವರ ಬಗ್ಗೆ ಮಾತಾಡೋದು ಬೇಡ
ಇವಾಗ ಅವ್ರು ನಾವೆಲ್ಲರೂ ಸೇರಿ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡಬೇಕು.ಆದ್ದರಿಂದ ಅವರ ಕೆಲಸ ಮಾಡಲಿ, ನಾನು ಕೆಲಸ ಮಾಡ್ತೀನಿ.ಅಂತಿಮವಾಗಿ ಕಾಂಗ್ರೆಸ್ ಗೆಲ್ಲಬೇಕಲ್ಲ..? ಅದಕ್ಕೆ ನಾನು ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ ಎಂದರು.
ಕಾಂಗ್ರೆಸ್ ನನಗೆ 3೦ ವರ್ಷಗಳಲ್ಲಿ ಎಲ್ಲ ಅವಕಾಶ ನೀಡಿದೆ
ನನ್ನನು ಇನ್ನೇನು ಮಾಡೋಕೆ ಸಾಧ್ಯ,ಆದರೆ ನನಗೆ ಕೊಟ್ಟಿದ್ರೆ ಅಲ್ಲಿ ಗೆಲ್ಲುವ ವಿಶ್ವಾಸ ಇತ್ತು ಕೇಳಿದ್ವಿ
ಅವರು ಕೊಡೋಕೆ ತೀರ್ಮಾನ ವನ್ನು ಕೂಡ ಮಾಡಿದ್ದರು.ಆದರೆ ನಮ್ಮಲ್ಲಿ ಒಗ್ಗಟ್ಟು ಬಂದಿಲ್ಲ, ಆದರೂ ಬೇಸರ ಇಲ್ಲ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಬರಬೇಕು. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ದನಾಗಿರುತ್ತೇನೆ.ಕೋಲಾರದಲ್ಲಿ ಯಾವಾಗ ಪ್ರಚಾರ ಶುರು ಮಾಡಿದ್ರು ಅಲ್ಲಿ ಹೋಗಿ ಒಟ್ಟಿಗೆ ಕೆಲಸ ಮಾಡ್ತೀನಿ ಎಂದರು.