ಬೆಂಗಳೂರು : ಇಂದು ಮೇಷ, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಈ ದಿನ ಯಾವ ರಾಶಿಯವರಿಗೆ ಶುಭ? ಯಾರಿಗೆ ಆಶುಭ?
- ಮೇಷ
ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ. ಆದಾಯದಲ್ಲಿ ಇಳಿಕೆ ಸಾಧ್ಯತೆ. ಹೊಸ ಕೆಲಸ (ಉದ್ಯಮ) ಆರಂಭಿಸಲು ಇದ್ದ ಸಮಸ್ಯೆ ನಿವಾರಣೆ ಆಗಲಿದೆ.
- ವೃಷಭ
ಪೊಲೀಸ್ ಉದ್ಯೋಗದಲ್ಲಿರುವವರಿಗೆ ವರ್ಗಾವಣೆ ಭಾಗ್ಯ. ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ. ಉನ್ನತ ಶಿಕ್ಷಣ ಮಾಡುತ್ತಿರುವವರಿಗೆ ಯಶಸ್ಸು.
- ಮಿಥುನ
ಕೆಲಸದ ಸ್ಥಳದಲ್ಲಿ ಧನಾತ್ಮಕ ನಿರ್ಧಾರ ಕೈಗೊಳ್ಳಲು ಉತ್ತಮ ಸಮಯ. ಹೊಟ್ಟೆ ನೋವಿನ ಸಮಸ್ಯೆ ಉಂಟಾಗುವ ಸಾಧ್ಯತೆ.
- ಕರ್ಕಾಟಕ
ನೀವು ಆರ್ಥಿಕವಾಗಿ ಬಲಿಷ್ಠರಾಗುವಿರಿ. ಪತಿ-ಪತ್ನಿ ನಡುವೆ ವಿವಾದ ಉಂಟಾಗುವ ಸಾಧ್ಯತೆ.
- ಸಿಂಹ
ಸಣ್ಣ-ಪುಟ್ಟ ವಿಷಯಗಳಿಗೆ ಭಿನ್ನಾಭಿಪ್ರಾಯ. ರಾಜಕೀಯ ಮುಖಂಡರಿಗೆ ಗೌರವ ಹೆಚ್ಚುತ್ತದೆ. ಆಸ್ತಿ ಖರೀದಿ ಮತ್ತು ಮಾರಾಟದಿಂದ ಲಾಭ.
- ಕನ್ಯಾ
ವ್ಯಾಪಾರದಲ್ಲಿ ಹೆಚ್ಚಿನ ಲಾಭ. ತಂದೆಯ ಮಾರ್ಗದರ್ಶನವನ್ನು ತೆಗೆದುಕೊಳ್ಳುವುದು ಸೂಕ್ತ.
- ತುಲಾ
ವಿವಾಹ ಕಾರ್ಯಗಳಲ್ಲಿ ಯಶಸ್ಸು. ಕೆಲವು ವಿಷಯಗಳಲ್ಲಿ ಜಾಗರೂಕರಾಗಿರುವುದು ಉತ್ತಮ.
- ವೃಶ್ಚಿಕ
ವೈಯಕ್ತಿಕ ಕಾರ್ಯದ ಒತ್ತಡವಿದ್ದರೂ, ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಮನೆಯ ಸಮಸ್ಯೆಗಳು ಬಗೆಹರಿಯಲಿದೆ.
- ಧನು
ಸಾಲ ಮರು ಪಾವತಿ ಮಾಡುವ ಬಗ್ಗೆ ಗಮನಕೊಡಿ. ಮನೆಯ ವಿಷಯ ಹೊರಗೆ ಬರಲು ಬಿಡಬೇಡಿ. ಅಪರಿಚಿತರನ್ನು ಅತಿಯಾಗಿ ನಂಬಬೇಡಿ.
- ಮಕರ
ತಂದೆ-ತಾಯಿ ಆರೋಗ್ಯದ ಬಗ್ಗೆ ಗಮನಹರಿಸಿ. ನಿಮ್ಮ ಸಾಧನೆಯ ಬಗ್ಗೆ ನಿಮಗೆ ಹೆಮ್ಮೆ ಇರಲಿ.
- ಕುಂಭ
ನಿಮ್ಮ ಸೋಮಾರಿತನವು ಕೆಲಸವನ್ನು ಹಾಳುಮಾಡುತ್ತದೆ. ಆಪ್ತರಿಗೆ, ಸಂಬಂಧಿಕರಿಗರ ಹಣವನ್ನ ನೀಡಬೇಡಿ.
- ಮೀನ
ಮನೆಯಲ್ಲಿ ಆರೋಗ್ಯಕರ ವಾತಾವರಣ ಇರುತ್ತದೆ. ಆರೋಗ್ಯ ಸಮಸ್ಯೆಯಿಂದ ಮುಕ್ತಿ ದೊರೆಯಲಿದೆ.