Friday, May 17, 2024

ಪ್ರತಾಪ್ ಸಿಂಹನಿಗೇ ಬುದ್ಧಿಭ್ರಮಣೆ ಆಗಿದೆ: ಎಂ. ಲಕ್ಷ್ಮಣ್

ಮೈಸೂರು: ಪ್ರತಾಪ್ ಸಿಂಹನಿಗೇ ಬುದ್ಧಿಭ್ರಮಣೆ ಆಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ತಿರುಗೇಟು ನೀಡಿದ್ದಾರೆ. 

ಎಂ.‌ ಲಕ್ಷ್ಮಣ್ ನನ್ನು ಜೈಲಿಗೆ ಕಳಿಸ್ತಿನಿ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ಬಗ್ಗೆ ಮಾತನಾಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹಗೆ ಬುದ್ದಿ ಭ್ರಮಾಣೆಯಾಗಿದೆ.ಅವರಿಗೆ ನಿಮಾನ್ಸ್ ನಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಬೇಕಿದೆ ಎಂದು ತಿರುಗೇಟು ನೀಡಿದ್ದಾರೆ.

ಮೊದಲು ನಿಮಗೆ ಟಿಕೆಟ್ ಮಿಸ್ ಮಾಡಿದ್ದು ಯಾರು? ಯಾಕೆ ಅನ್ನೋ ಸತ್ಯ ಮೊದಲು ಹೇಳಿ.ನೀವು ನನ್ನ ಎದುರಾಳಿಯೆ ಅಲ್ಲ. ಯಾಕೆ ನನ್ನ ಬಗ್ಗೆ ಮಾತಾಡ್ತಿರಿ? ನಾನು ಒಕ್ಕಲಿಗ ಅಲ್ಲ ಅಂತಾ ಫ್ರೂಪ್ ಇದ್ದರೆ ಕೊಡಿ.
ನಾವು ಹುಟ್ಟಿದ್ದಾಗ ಒಕ್ಕಲಿಗ. ಬೆಳೆಯುತ್ತಾ ವಿಶ್ವ ಮಾನವ ಎಂದರು.

ಹತಾಶರಾಗಿ ಪ್ರತಾಪ್ ಸಿಂಹ ಮಾತಾಡುತ್ತಿದ್ದಾರೆ.

ಕೈ ಮುಗಿದು ಕೇಳ್ತಿನಿ. ಚುನಾವಣೆ ಗೆ ಮುನ್ನವೆ ನನ್ನ ಜೈಲಿಗೆ ಕಳಿಸೋ ಕೆಲಸ ಮಾಡಿ. ನನ್ನ ಮೇಲೆ ನಿಮ್ಮ ಬಗ್ಗೆ ಏನೂ ಮಾತಾಡಬಾರದು ಎಂಬ ತಡೆಯಾಜ್ಞೆ ಯಾಕೆ ತಂದ್ರಿ? ತಡೆಯಾಜ್ಞೆ ತೆರವು ಮಾಡಿ ಬನ್ನಿ ನಂದೇನೂ ಚರಿತ್ರೆ, ನಿನ್ನದೇನೂ ಚರಿತ್ರೆ ಅಂತಾ ಮುಕ್ತವಾಗಿ ಚರ್ಚೆ ಮಾಡೋಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರು.

ಎಚ್.ಡಿ. ದೇವೇಗೌಡರನ್ನು ನಾನು ಯಾವತ್ತಾದರೂ ಬೈಯ್ದಿದ್ದಿ ತೋರಿಸಿ.ನಾನು ಜೂಜಾಡಲ್ಲ, ಸಿಗರೇಟ್ ಸೇದಲ್ಲ, ರಾತ್ರಿ ವ್ಯವಹಾರ, ಹಗಲು ವ್ಯವಹಾರ ಮಾಡಲ್ಲ.ಮಡಿಕೇರಿಯಲ್ಲಿ ಎಸ್ಟೇಟ್ ಇಲ್ಲ. ರೆಸಾರ್ಟ್ ಮಾಡಿಲ್ಲ.ನ್ಯಾಯಾಲಯದಲ್ಲಿನ ತಡೆಯಾಜ್ಞೆ ತೆರವು ಮಾಡಿ ನನ್ನದ್ದು ಕೊಳಕು ಜೀವನನಾ ನಿಮ್ಮದು ಕೊಳಕು ಜೀವನನ್ನ ಎಂಬುದನ್ನು ಜನರ ಮುಂದೆ ಬಿಚ್ಚಿಡುತ್ತಿವೆ ಎಂದರು.

RELATED ARTICLES

Related Articles

TRENDING ARTICLES