Saturday, May 18, 2024

ಮುನಿಯಪ್ಪ ಕುಟುಂಬ ರಾಜಕೀಯವಾಗಿ ಮುಗಿಸಲು ಆಗಲ್ಲ: ‌ಕೆ.ಹೆಚ್ ಮುನಿಯಪ್ಪ

ಬೆಂಗಳೂರು: ಮುನಿಯಪ್ಪ ಕುಟುಂಬ ರಾಜಕೀಯವಾಗಿ ಮುಗಿಸಲು ಆಗಲ್ಲ ಎಂದು ‌ಕೆ.ಹೆಚ್ ಮುನಿಯಪ್ಪ ಕಿಡಿಕಾರಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾನು ಎಲ್ಲವನ್ನು ಹೈಕಮಾಂಡ್​ಗೆ ಬಿಟ್ಟಿದ್ದೇನೆ ಅವರು ಯಾವುದೇ  ತೀರ್ಮಾನ ತಗೆದುಕೊಂಡರು ನಾನು ಬದ್ಧವಾಗಿದ್ದೇನೆ. ನಾನು ನನ್ನ ಎಲ್ಲರ ಇತಿಮಿತಿಗಳಲ್ಲಿ ಮಾತಾಡಿದ್ದೇನೆ. ಎಂದು ಹೇಳಿದ್ದರು.

ನಾನು ಸೋತಿದ್ದೇನೆ,ಒಂದು ಅವಕಾಶ ಮಾಡಿಕೊಡಿ ಎಂದು ಹೇಳಿದ್ದೆ ಸಿಎಂ ಹಾಗೂ ಅಧ್ಯಕ್ಷರ ಸಮ್ಮುಖದಲ್ಲಿ ಈ ವಿಚಾರ ಚರ್ಚೆ ಮಾಡಿದ್ದೇನೆ.ನನ್ನಿಂದ ಯಾರಿಗೂ ಕೆಟ್ಟದಾಗಿಲ್ಲ.ನಾನು ಯಾರನೆಲ್ಲ ಬೆಳಸಿದ್ದೇನೆ ಎಂಬುದು ಮಾಧ್ಯಮಕ್ಕೆ ಗೊತ್ತಾಗಿದೆ ಈ ಸಂದರ್ಭದಲ್ಲಿ ಮಾತನಾಡಲ್ಲ ನಾನೇ ಸಾಕಿದ ಗಿಳಿ, ಈಗ ನಿಮ್ಮನ್ನೇ‌ ಕಚ್ಚುತ್ತಿದೆ. ನಮಗೆ ಟಿಕೆಟ್ ಕೊಟ್ಟರೆ ಗೆಲ್ಲುತ್ತೇವೆ ಎಂಬ ವರದಿ ಇದೆ.ಹೈಕಮಾಂಡ್‌ಗೆ ಡ್ಯಾಮೇಜ್ ಆಗುವ ಪ್ರಶ್ನೆಗೆ ಉತ್ತರ ಕೊಡಲ್ಲ ಎಂದು ಕಿಡಿಕಾರಿದ್ದರು.

ಮುನಿಯಪ್ಪ ಕುಟುಂಬ ರಾಜಕೀಯವಾಗಿ ಮುಗಿಸಲು ಆಗಲ್ಲ

ಕಾಂಗ್ರೆಸ್ ಗೆಲ್ಲಬೇಕು ಎಂದು ಯೋಚನೆ ಮಾಡುತ್ತಿದ್ದೇನೆ.ಕಾಂಗ್ರೆಸ್ ಪಕ್ಷ ದೊಡ್ಡದು, ಸಿಎಂ ಹಾಗೂ ಅಧ್ಯಕ್ಷರು ಇದ್ದಾರೆ ನೋಡೋಣ. ನಾನ್‌ ಹೇಳ್ತೀನೋ ಹಾಗೆ ನಡೆದುಕೊಳ್ಳುತ್ತೇನೆ. ಅಧ್ಯಕ್ಷರು ಬರ್ತಿನಿ ಸರಿ ಮಾಡ್ತೀನಿ ಅಂತ ಹೇಳಿದ್ದಾರೆ ನೋಡೋಣ ಎಂದರು.

RELATED ARTICLES

Related Articles

TRENDING ARTICLES