Saturday, May 4, 2024

ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ‌ ಅಭ್ಯರ್ಥಿಗಳ ಗೆಲುವು‌ ಖಚಿತ: ಬಿ.ಎಸ್.ಯಡಿಯೂರಪ್ಪ

ಹುಬ್ಬಳ್ಳಿ: ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ‌ ಅಭ್ಯರ್ಥಿಗಳ ಗೆಲುವು‌ದು ಖಚಿತ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 28ಕ್ಕೆ 28 ಸ್ಥಾನಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ.ರಾಜ್ಯದಲ್ಲಿ ಕೆಲವೊಂದು ಕ್ಷೇತ್ರಗಳಲ್ಲಿ ಸಮಸ್ಯೆ ಇದೆ ಬಗ್ಗೆ ಹರಿಸುತ್ತೇವೆ.ಬಿಜೆಪಿ ಜೆಡಿಎಸ್ ಮೈತ್ರಿಗೆ ಯಾವುದೇ ಅಡೆತಡೆಯಿಲ್ಲ. ಮತ್ತೊಮ್ಮೆ ಮೋದಿಯವರನ್ನ ಪ್ರಧಾನಿಯನ್ನಾಗಿ ಮಾಡೋದು ನಮ್ಮ‌ಗುರಿ ಎಂದರು.

ಪ್ರಹ್ಲಾದ್ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ‌ ಆರೋಪ‌ ವಿಚಾರವಾಗಿ ಮಾತನಾಡಿಸದ ಅವರು,ಯಾವುದೇ ಕಾರಣಕ್ಕೂ ಜೋಶಿ‌ ಕ್ಷೇತ್ರ ಬದಲಾವಣೆ ಪ್ರಶ್ನೆಯೇ ಇಲ್ಲ.ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ಮಠಾಧೀಶರಲ್ಲಿ ತಪ್ಪುಗ್ರಹಿಕೆಯಾಗಿದೆ.ಆ ತಪ್ಪು‌ಗ್ರಹಿಕೆ ಸರಿಪಡಿಸುವಂತಹ ಕೆಲಸ ಮಾಡುತ್ತೇನೆ.ದಿಂಗಾಲೇಶ್ವರ ಸ್ವಾಮೀಜಿಗಳ ಜೊತೆ ಮಾತನಾಡಿ ಮನವೋಲಿಸುವ ಪ್ರಯತ್ನ‌ ಮಾಡುತ್ತೇನೆ.ಜೋಶಿಯವರು ಎಲ್ಲ‌ಸಮುದಾಯಗಳನ್ನ‌ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವವರು. ಜೋಶಿಯವರ ಕಾರ್ಯಕ್ಷಮತೆಯಿಂದಲೇ‌ ಮೋದಿಯವರು ದೊಡ್ಡ ಸ್ಥಾನ‌ವಹಿಸಿದ್ದಾರೆ. ಹೀಗಾಗಿ ಅವರನ್ನ ಬದಲಾವಣೆ ಮಾಡುವ ಪ್ರಶ್ನೆಯೇ‌ ಇಲ್ಲ ಎಂದು ತಿಳಿಸಿದ್ದರು.

 

RELATED ARTICLES

Related Articles

TRENDING ARTICLES