ಬೆಳಗಾವಿ: ನನ್ನ ಮೈಯಲ್ಲಿ ಹರಿಯುತ್ತಿರೋದು ರಾಣಿ ಚೆನ್ನಮ್ಮನ ರಕ್ತ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿಕೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ಕೊಟ್ಟಿದ್ದಾರೆ.
ಪಂಚಮಸಾಲಿ ಅಲ್ಲಾ ಬಣಜಿಗ ಎಂಬ ನಿರಾಣಿ ಹೇಳಿಕೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನನ್ನ ಮೈಯಲ್ಲಿ ಹರಿಯುತ್ತಿರೋದು ರಾಣಿ ಚೆನ್ನಮ್ಮನ ರಕ್ತ.ನನ್ನ ಮಗನ ಮೇಲೆ ಮೈಯಲ್ಲಿ ಹರಿಯುತ್ತಿರೋದು ಪಂಚಮಸಾಲಿ ರಕ್ತ .ಆದರೆ,ನಾವು ಬಸವಣ್ಣನವರು ತತ್ವ ನಂಬಿದವರು, ಅಂಬೇಡ್ಕರ್ ಸಂವಿಧಾನ ಒಪ್ಪಿಕೊಂಡವರು ಎಂದರು.
ನಿರಾಣಿಗೆ ಬುದ್ಧಿಭ್ರಮಣೆ ಆಗಿದೆ
ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ನಾನು ನನ್ನ ಮಗ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದೇವೆ. 2ಎ ಮೀಸಲಾತಿಗಾಗಿ ನಾನು ನನ್ನ ತಮ್ಮ ಇಡೀ ಕುಟುಂಬವೇ ಹೋರಾಟ ಮಾಡಿದೆ.
ಇದನ್ನೂ ಓದಿ: ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಮಂಡ್ಯದಿಂದ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧೆ
ಪಂಚಮಸಾಲಿ ಅಲ್ಲಾ ಬಣಜಿಗ ಎಂದು ಹೇಳಿರುವ ನಿರಾಣಿಗೆ ಬುದ್ಧಿಭ್ರಮಣೆ ಆಗಿದೆ.ಬಹುಶಃ ನಿರಾಣಿ ಅಣ್ಣನವರು ಎಲ್ಲೋ ಒಂದು ಕಡೆ ನಿರಾಸೆ ಆಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.