ಶಿವಮೊಗ್ಗ: ಬಂಗಾರಪ್ಪ ಕೊಟ್ಟ ಯೋಜನೆ ನಿಲ್ಲಿಸಲು ಯಾವ ಸರ್ಕಾರಕ್ಕೂ ಧಮ್ ತಾಕತ್ತು ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು,ಬಂಗಾರಪ್ಪನವರಿಗೆ ಒಂದು ಕಣ್ಣು ಸೊರಬ ಆಗಿತ್ತು, ಮತ್ತೊಂದು ಕಣ್ಣು ಶಿಕಾರಿಪುರ ಆಗಿತ್ತು ಆದರೆ ಅವರಿಗೆ ಸೋಲು ಆಯ್ತು.ಬಂಗಾರಪ್ಪ ಹೊಟ್ಟೆಯಲ್ಲಿ ಹುಟ್ಟಿರೋದು ನಮ್ಮ ಪುಣ್ಯ. ಗೀತಾಕ್ಕನ ನಿಮ್ಮ ಮಡಿಲಿಗೆ ಹಾಕಿದ್ದೇವೆ.ಏನ್ ಮಾಡ್ತೀರಾ ನೋಡಿ ಎಂದರು.
ರಾಜ್ಯದಲ್ಲಿ ಸರ್ಕಾರ ಇರೋದು ಜನಪರ ಸರ್ಕಾರ. ಶಿಕಾರಿಪುರದಲ್ಲಿ ಹಿಂದುಳಿದ ನಾಯಕರ ಮೇಲೆ ಕೇಸ್ ಹಾಕೋದು, ರೌಡಿಶೀಟರ್ ಮಾಡಿದ್ದಾರೆ.ಹೋರಾಟದ ಮನೋಭಾವನೆ ನನಗೆ ನಮ್ಮ ಅಪ್ಪ ಹೇಳಿಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ನನ್ನನ್ನ ಯಾರು ಸೋಲಿಸೋಕೆ ಆಗೋಲ್ಲ
ನನ್ನ ನಾಯಕತ್ವ ಉಳಿಸಿಕೊಳ್ತೀನಿ.ಬಡವರಿಗೆ ಭೂ ಹಕ್ಕು ನೀಡಲು ಬಂಗಾರಪ್ಪ ಬಕರ್ ಹುಕುಂ ಜಾರಿಗೆ ತಂದಿದ್ದಾರೆ.ಸಂಸದರು ಎಷ್ಟು ಹಸಿ ಸುಳ್ಳು ಹೇಳ್ತಾ ಇದ್ದಾರೆ ಅದನ್ನ ನೀವು ಕೇಳಬೇಕು. ಎಲ್ಲಿ ಆಗಿದೆ ಅಭಿವೃದ್ಧಿ ಎಂದು ನೀವು ಪ್ರಶ್ನೆಸಿಬೇಕು ಎಂದರು.