Monday, May 20, 2024

ಹೆಚ್‌ಡಿಕೆ ಹೋದಲೆಲ್ಲಾ ಕರ್ಮ ಭೂಮಿ ಅಂತಾರೆ ಮಂಡ್ಯದಲ್ಲಿ ಯಾರು ನಿಲ್ತಾರೋ ಗೊತ್ತಿಲ್ಲ: ಚಲುವರಾಯಸ್ವಾಮಿ ಲೇವಡಿ

ಮಂಡ್ಯ: ಹೆಚ್​ಡಿ ಕುಮಾರಸ್ವಾಮಿ ಒಂದು ಕಡೆ ಹೋದಾಗ ಅದು ನನ್ನ ಕರ್ಮ ಭೂಮಿ ಅಂತಾರೆ.ಮಂಡ್ಯದಲ್ಲಿ ಯಾರು ನಿಲ್ತಾರೋ ಗೊತ್ತಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಲೇವಡಿ ಮಾಡಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹೆಚ್​ಡಿ ಕುಮಾರಸ್ವಾಮಿ ಒಂದು ಕಡೆ ಹೋದಾಗ ಅದು ನನ್ನ ಕರ್ಮ ಭೂಮಿ ಅಂತಾರೆ. ಅದೇ ರೀತಿ ಮಂಡ್ಯ, ಚನ್ನಪಟ್ಟಣನ್ನು ಕರ್ಮ ಭೂಮಿ ಅಂತಾರೆ. ಕುಮಾರಸ್ವಾಮಿ ರಾಜ್ಯದ ನಾಯಕ.ದೇವೇಗೌಡರ ಮಗ ಅವರು ಅವರ ಬಗ್ಗೆ ಗೌರವವಿದೆ.ನಮ್ಮ ಜಿಲ್ಲೆಯ ಇತಿಹಾಸದಲ್ಲಿ ಬೇರೆ ಜಿಲ್ಲೆಯವರಿಗೆ ಭಾವನಾತ್ಮಕವಾಗಿ ಅವಕಾಶ ನೀಡಿಲ್ಲ.ರಾಮನಗರ ಪೂರ್ತಿ ತಿರಸ್ಕಾರ ಮಾಡ್ತಾರೋ.ಅಥವಾ ಅಲ್ಲಿಯೇ ಅರ್ಧ ಬಿಟ್ಟು ಇಲ್ಲಿಗೆ ಬರ್ತಾರೋ ಗೊತ್ತಿಲ್ಲ. ಇಲ್ಲ ಕೊನೆ ಘಳಿಗೆಯಲ್ಲಿ ಯಾರನ್ನು ನಿಲ್ಲಿಸುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

3 ಬಾರಿ ಮುಖ್ಯಮಂತ್ರಿ ಮಾಡಿದ ಜಿಲ್ಲೆ ರಾಮನಗರ

ಅಂತಹ ಜಿಲ್ಲೆಯನ್ನು ಪ್ರಾಣ ಹೋಗುವವರೆಗೆ ಬಿಟ್ಟು ಹೋಗಲ್ಲ ಅಂತಾ ಹೇಳ್ತಾ ಇದ್ರು.ಈಗ ಮಂಡ್ಯಗೆ ಹೋಗ್ತಾ ಇದಾರೆ ಎಂದು‌ ರಾಮನಗರ ಜಿಲ್ಲೆಯವರು ಹೇಳ್ತಾ ಇದ್ದಾರೆ.ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರೆ ನಮ್ಮ‌ ಚುನಾವಣೆ ನಾವು ಮಾಡ್ತೀವಿ.ನಾವು ಜನರ ಮುಂದೆ ನಮ್ಮ ಕೆಲಸ ಇಟ್ಟುಕೊಂಡು ಹೋಗ್ತೀವಿ.ನಾವು ಯಾವುದು ಸುಲಭ, ಕಷ್ಟ ಎಂದು ಜನರ ಮುಂದೆ ಹೋಗಲ್ಲ.

ನಾನು ಯಾರ ಬಗ್ಗೆಯೂ ಲಘುವಾಗಿ ಮಾತಾಡಲ್ಲ

ಮಂಡ್ಯ ಜನರು ಸ್ಮೂಕ್ಷ್ಮ ಹಾಗೂ ಬುದ್ದಿವಂತರು. ಜಿಲ್ಲೆಯ ಜನ ತೀರ್ಮಾನ ಮಾಡುವಾಗ 10 ಸಲ ಯೋಚನೆ ಮಾಡ್ತಾರೆ.ನಮ್ಮ ಅಭಿವೃದ್ಧಿ ನೋಡಿಕೊಂಡು ಜನರು ನಮಗೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ  ಎಂದರು.

RELATED ARTICLES

Related Articles

TRENDING ARTICLES