ಬೆಂಗಳೂರು : ಇಂದು ಹೋಳಿ ಹುಣ್ಣಿಮೆ. ಕೈವಾರ ಶ್ರೀ ಯೋಗಿ ನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿ. ಈ ಶುಭ ದಿನ ಯಾವ ರಾಶಿಯವರಿಗೆ ಶುಭ? ಯಾರಿಗೆ ಆಶುಭ? ಇಲ್ಲಿದೆ ಸಂಪೂರ್ಣ ಮಾಹಿತಿ.
- ಮೇಷ ರಾಶಿ
ಪ್ರೇಯಸಿಯೊಂದಿಗೆ ವೈಮನಸ್ಸು (ಜಗಳ) ಆಗಬಹುದು. ಮನಸ್ಸಿನಲ್ಲಿ ಹೊಸ ಸೃಜನಾತ್ಮಕ ಆಲೋಚನೆ ಮೂಡುತ್ತದೆ.
- ವೃಷಭ ರಾಶಿ
ನೀವು ಜವಾಬ್ದಾರಿಯುತ ಕೆಲಸದ ಹೊಣೆಗಾರಿಕೆ ನಿಭಾಯಿಸುತ್ತೀರಿ. ವ್ಯಾಪಾರ ಉದ್ದೇಶಕ್ಕಾಗಿ ಪ್ರಯಾಣ ಕೈಗೊಳ್ಳಬಹುದು.
- ಮಿಥುನ ರಾಶಿ
ಕೆಲಸದ ಸ್ಥಳದಲ್ಲಿ ಸಮಸ್ಯೆ. ಆದರೆ, ಪೂರ್ವಿಕರ ಆಸ್ತಿಗೆ ಸಂಬಂಧಿಸಿದ ವಿವಾದ ಪರಿಹಾರ.
- ಕರ್ಕ ರಾಶಿ
ವಿದೇಶ ಪ್ರಯಾಣದ ಸಮಸ್ಯೆ ನಿವಾರಣೆ. ಹಲವರಿಗೆ ಸಹಾಯ ಮಾಡಲು ಮುಂದಾಗುತ್ತೀರಿ.
- ಸಿಂಹ ರಾಶಿ
ಆಸ್ತಿ ವಿವಾದದಲ್ಲಿ ಎಚ್ಚರಿಕೆವಹಿಸುವುದು ಅಗತ್ಯ. ಅಪರಿಚಿತ ಎಂಬ ಮನೋಭಾವನೆ ಉಂಟಾಗಲಿದೆ.
- ಕನ್ಯಾ ರಾಶಿ
ವ್ಯವಹಾರದಲ್ಲಿ ಆರ್ಥಿಕ ಲಾಭ. ಸ್ನೇಹಿತರೊಂದಿಗೆ ಗಂಭೀರ ವಿಷಯದ ಬಗ್ಗೆ ಚರ್ಚೆ.
- ತುಲಾ ರಾಶಿ
ಧಾರ್ಮಿಕ ಸ್ಥಳಗಳಿಗೆ ಭೇಟಿ ಸಾಧ್ಯತೆ. ವ್ಯವಹಾರದಲ್ಲಿ ಹೊಸ ಒಪ್ಪಂದ ಹಾಗೂ ಕೆಲಸದ ಗುಣಮಟ್ಟ ಹೆಚ್ಚಳ.
- ವೃಶ್ಚಿಕ ರಾಶಿ
ವಿದ್ಯಾರ್ಥಿಗಳು ಅಧ್ಯಯನದ ಕಡೆಗೆ ಗಮನಹರಿಸುವುದು ಉತ್ತಮ. ಕೆಲಸದ ಸ್ಥಳದಲ್ಲಿ ಹಸ್ತಕ್ಷೇಪ ಬೇಡ.
- ಧನು ರಾಶಿ
ನಿಮ್ಮ ಮೇಲೆ ಬೇರೆಯವರು ಹೆಚ್ಚು ಅವಲಂಬಿತರಾಗಿರುತ್ತಾರೆ. ಉತ್ತಮರ ಸಂಘದಲ್ಲಿ ಇರಲು ಇಷ್ಟಪಡುತ್ತೀರಿ.
- ಮಕರ ರಾಶಿ
ಹೊಸ ಕೆಲಸ ಪ್ರಾರಂಭಕ್ಕೆ ಶುಭ ದಿನವಲ್ಲ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹಿನ್ನಡೆ ಸಾಧ್ಯತೆ.
- ಕುಂಭ ರಾಶಿ
ವ್ಯವಹಾರದಲ್ಲಿ ನೀವು ಉತ್ತಮ ಲಾಭ ಸಾಧ್ಯತೆ. ದೊಡ್ಡ ಕಂಪನಿಯಿಂದ ಉದ್ಯೋಗದ ಆಫರ್ ಬರುವ ಸಾಧ್ಯತೆ.
- ಮೀನ ರಾಶಿ
ಸಾಲಗಾರರ ಕಾಟ, ಸಾಲ ಮರುಪಾವತಿ ಮಾಡುವಂತೆ ಒತ್ತಡ. ಕೆಲಸದ ಸ್ಥಳದಲ್ಲಿ ತೊಂದರೆ.