Saturday, May 18, 2024

ಗಣಿ ಧಣಿ ಜನಾರ್ದನ ರೆಡ್ಡಿ ಮರಳಿ ಬಿಜೆಪಿ ಸೆರ್ಪಡೆ: ಮುಹೂರ್ತ ಫಿಕ್ಸ್..?

ಬೆಂಗಳೂರು: ಗಣಿ ಧಣಿ ಶಾಸಕ ಜನಾರ್ದನ ರೆಡ್ಡಿ ಘರ್​ ವಾಪ್ಸಿಗೆ ಮುಹೂರ್ತ ಫಿಕ್ಸ್​ ಆಗಿದ್ದು,ನಾಳೆ ಬಿಜೆಪಿ ಸೆರ್ಪಡೆಯಾಗುವ ಸಾಧ್ಯತೆ ಇದೆ. 

ಹೌದು, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಮರಳಿ ತಮ್ಮ ಮಾತೃಪಕ್ಷವಾದ ಬಿಜೆಪಿಗೆ ಸೇರುತ್ತಿರುವುದು ಖಾತ್ರಿಯಾಗಿದೆ. ಈ ಬಗ್ಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಜಗದೀಶ್ ಶೆಟ್ಟರ್ ಬಳಿಕ ಮತ್ತೊಬ್ಬ ಬಿಜೆಪಿ ಮುಖಂಡನ ಘರ್ ವಾಪ್ಸಿಗೆ ವೇದಿಕೆ ಸಿದ್ಧವಾಗಿದೆ. ಯಾವುದೇ ಷರತ್ತುಗಳಿಲ್ಲದೇ ಬಿಜೆಪಿಗೆ ಸೇರಲು ಜನಾರ್ದನ ರೆಡ್ಡಿ ಒಪ್ಪಿಗೆ ನೀಡಿದ್ದಾರೆ.

ರಾಜ್ಯ ಬಿಜೆಪಿ ನಾಯಕರು ಹಾಗೂ ಶ್ರೀರಾಮುಲು ಜೊತೆ ರಹಸ್ಯ ಸಭೆ ನಡೆಸಿ ಸೇರ್ಪಡೆಗೆ ಸಮ್ಮತಿ ನೀಡಿದೆ ಭಾನುವಾರ ಸಂಜೆ ಜನಾರ್ದನ ರೆಡ್ಡಿ ಅವರು ತಮ್ಮ ಬೆಂಬಲಿಗರ ಸಭೆ ಕರೆದಿದ್ದು ಸೋಮವಾರ ಅಥವಾ ಮಂಗಳವಾರ ಬಿಜೆಪಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Related Articles

TRENDING ARTICLES