Wednesday, July 3, 2024

ಮೋದಿ ಅಮಿತ್ ಶಾ ಕಪಿಮುಷ್ಟಿಯಲ್ಲಿ ಐಟಿ ಇಡಿ ಸಿಕ್ಕಿದೆ: ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ಅರವಿಂದ್ ಕೇಜ್ರಿವಾಲ್‌ರನ್ನು ಅಕ್ರಮವಾಗಿ ಬಂಧಿಸಿದ್ದಾರೆ. ಮೋದಿ ಅಮಿತ್ ಶಾ ಕಪಿಮುಷ್ಟಿಯಲ್ಲಿ ಐಟಿ ಇಡಿ ಸಿಕ್ಕಿದೆ ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್ ಬಂಧನದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಧನ ಖಂಡಿಸಿ ನಾವು ಕರಾಳ ದಿನವನ್ನು ಆಚರಿಸ್ತೇವೆ. ಅರವಿಂದ್ ಕೇಜ್ರಿವಾಲ್ ವಿರುದ್ಧ ಯಾವುದೇ ಸಾಕ್ಷಿ ಸಿಕ್ಕಿಲ್ಲ.ಚುನಾವಣೆ ಸಮಯದಲ್ಲಿ ಅಕ್ರಮವಾಗಿ ಬಂಧಿಸಿ ಹೆದರಿಸುತ್ತಿರುವ ಪ್ರಯತ್ನ ಇದು.ಇಂತಹ ಹೆದರಿಕೆಗೆ ನಾವು ಬಗ್ಗೋದಿಲ್ಲ. ಮೋದಿ ಅಮಿತ್ ಶಾ ಕಪಿಮುಷ್ಟಿಯಲ್ಲಿ ಐಟಿ ಇಡಿ ಸಿಕ್ಕಿದೆ ಎಂದು ವಾಗ್ದಾಳಿ ನಡೆಸಿದ್ದರು.

ಎಲೆಕ್ಟ್ರೋಲ್ ಬಾಂಡ್ ಮರೆಮಾಚಲು ಇಂತಹ ಕೃತ್ಯ ಮಾಡಲಾಗ್ತಿದೆ

ಬಿಜೆಪಿ ವಿರುದ್ಧ ಇಂಡಿಯಾ ಮಹಾಘಟಭಂದನ್ ಒಗ್ಗಟ್ಟಾಗಿ ಹೋರಾಡಬೇಕು.ರಾಜ್ಯದ ಕಾಂಗ್ರೆಸ್ ನಾಯಕರಿಗೂ ನಮ್ಮ ಪ್ರತಿಭಟನೆಗೆ ಬೆಂಬಲಿಸುವಂತೆ ಮನವಿ ಮಾಡ್ತೇವೆ. ಇದೆಲ್ಲಾ ಎಲೆಕ್ಟ್ರೋಲ್ ಬಾಂಡ್ ಮರೆಮಾಚಲು ಇಂತಹ ಕೃತ್ಯ ಮಾಡಲಾಗ್ತಿದೆ ಎಂದರು.

RELATED ARTICLES

Related Articles

TRENDING ARTICLES