ದೆಹಲಿ: ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆ ಬಿಜೆಪಿ ಹೈಕಮಾಂಡ್ ತಮಿಳುನಾಡು ಲೋಕಸಭಾ ಕ್ಷೇತ್ರದ 9 ಅಭ್ಯರ್ಥಿಗಳು ಪಟ್ಟಿಯನ್ನು ಇಂದು ಬಿಡುಗಡೆಗೊಳಿಸಿದೆ.
ಇದನ್ನೂ ಓದಿ: ಕಾಂಗ್ರೆಸ್ ಬ್ಯಾಂಕ್ ಖಾತೆಗಳು ಸೀಜ್ : ಬಿಜೆಪಿ ವಿರುದ್ದ ಸೋನಿಯಾ ಗಾಂಧಿ ಕಿಡಿ
ತಮಿಳುನಾಡಿನಲ್ಲಿ ಈ ಬಾರಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎಂದು ಪಕ್ಷ ಸಂಘಟನೆ ನಡೆಸುತ್ತಿರುವ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರನ್ನು ತಮಿಳುನಾಡಿನ ಕೊಯಂಬತೂರ್ ಲೋಕಸಭಾಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ.
ಚನ್ನೈ ದಕ್ಷಿಣ ಕ್ಷೇತ್ರದಿಂದ ತೆಲಂಗಾಣದ ಮಾಜಿ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್, ಚನ್ನೈ ಸೆಂಟ್ರಲ್ ನಿಂದ ವಿನೋಜ್.ಪಿ ಸೆಲ್ವಮ್, ವೆಲ್ಲೂರ್ ಕ್ಷೇತ್ರದಿಂದ ಡಾ.ಎ ಸಿ ಶಣ್ಮುಗಂ, ಕೃಷ್ಣಗಿರಿ ಕ್ಷೇತ್ರದಿಂದ ಸಿ. ನರಸಿಂಹನ್ ನೀಲಗಿರೀಸ್ ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು ಈ ಕ್ಷೇತ್ರದಿಂದ ಡಾ.ಎಲ್ ಮುರುಗನ್, ಕೊಯಂಬತೂರ್ ಕ್ಷೇತ್ರದಿಂದ ಕೆ.ಅಣ್ಣಾಮಲೈ ಪೆರಂಬಲೂರ್ ಕ್ಷೇತ್ರದಿಂದ ಪಾರಿವೇಂದರ್ ತೂತ್ತುಕುಡಿ ಕ್ಷೇತ್ರದಿಂದ ನೈನರ್ ನಾಗೇಂದ್ರನ್, ಕನ್ಯಾಕುಮಾರಿ ಕ್ಷೇತ್ರದಿಂದ ಪೊನ್. ರಾಧಾಕೃಷ್ಣನ್ ಕಣಕ್ಕಿಳಿಯಲಿದ್ದಾರೆ.
The Central Election Committee of the Bharatiya Janata Party has decided the following names for the ensuing General Elections to the Lok Sabha. Here is the third list. pic.twitter.com/Hb5NnXyXvy
— BJP (@BJP4India) March 21, 2024