Saturday, May 11, 2024

ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರೋರು ಬರಲಿ, ನಮ್ಮ ತಂತ್ರಗಾರಿಕೆಯನ್ನು ನಾವು ಬಹಿರಂಗಗೊಳಿಸಲ್ಲ: ಡಿ.ಕೆ ಶಿವಕುಮಾರ್​

ಬೆಂಗಳೂರು: ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಬರೋರು ಬರಲಿ, ನಮ್ಮ ತಂತ್ರಗಾರಿಕೆಯನ್ನು ನಾವು ಬಹಿರಂಗಗೊಳಿಸಲ್ಲ ಎಂದು ಡಿ.ಕೆ ಶಿವಕುಮಾರ್​ ಹೇಳಿದ್ದಾರೆ. 

ಸುದ್ದಿಗಾರೊಂದಿಗೆ ಮಾತನಾಡಿದ ಅವರು,ರಾಜಕಾರಣದಲ್ಲಿ ಯಾರಿಗೆ ಟಿಕೆಟ್ ಸಿಗಲಿಲ್ಲವೋ ಆಗ ಇವೆಲ್ಲಾ ಸಾಮಾನ್ಯ ಆಯನೂರು ಮಂಜುನಾಥ್ ಟಿಕೆಟ್ ಸಿಗಲಿಲ್ಲ ನಮ್ಮ ಪಾರ್ಟಿಗೆ ಬಂದರು. ಬಿಜೆಪಿಯಿಂದ ಮೂಡಿಗೆರೆಯಲ್ಲಿ ಕುಮಾರಸ್ವಾಮಿ ಕೊಡಲಿಲ್ಲ.ನಮ್ಮ ಪಾರ್ಟಿಯಿಂದ ಅಖಂಡ ಶ್ರೀನಿವಾಸ್ ಮೂರ್ತಿಗೆ ಕೊಡಲಿಲ್ಲ ಶೆಟ್ಟರ್ ಗೆ ಕೊಡ್ಲಿಲ್ಲ, ನಾವು ಕರ್ಕೊಂಡು ಬಂದು ನಿಲ್ಲಿಸಿದ್ವಿ ಸವದಿಗೆ ಕೊಡಲಿಲ್ಲ ಅವರನ್ನೂ ಕರ್ಕೊಂಡು ಬಂದು ನಿಲ್ಲಿಸಿದ್ವಿ ಇದೆಲ್ಲವೂ ರಾಜಕೀಯದ ಸಂದರ್ಭದಲ್ಲಿ ನಡೆಯುತ್ತೆ ಯಾರ್ಯಾರು ಬರುತ್ತೇವೆ ಅಂತಾರೆ ಅವರೆಲ್ಲಾ ಬರಲಿ ಎಂದರು.

ಸಂಸದ ಸದಾನಂದಗೌಡ ರಾಜಕೀಯ ನಡೆಯ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರೋರು ಬರಲಿ ನಮ್ಮ ತಂತ್ರಗಾರಿಕೆಯನ್ನು ನಾವು ಬಹಿರಂಗಗೊಳಿಸಲ್ಲ ಎಂದ ಡಿಕೆ ಶಿವಕುಮಾರ್​ ಹೇಳಿದ್ದಾರೆ.

RELATED ARTICLES

Related Articles

TRENDING ARTICLES