ಶಿವಮೊಗ್ಗ: ಈ ಬಾರಿಯ ಚುನಾವಣೆ ರಾಷ್ಟ್ರಭಕ್ತರು ಹಾಗೂ ತುಕ್ಡೆ ಗ್ಯಾಂಗ್ ನಡುವೆ ನಡೆಯುತ್ತಿದೆ ಎಂದು ಕಾಂಗ್ರೆಸ್ನ್ನು ಸಿ.ಟಿ ರವಿ ಕುಟುಕಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ರಾಘವೇಂದ್ರ ಅಭಿವೃದ್ಧಿ ಪರವಾಗಿ ಮಾತನಾಡಿದ್ದರು.ಆದರೆ ಕೇವಲ ಅಭಿವೃದ್ಧಿ ಒಂದೇ ಸಾಕಾಗಲ್ಲ.ಹಿಂಧುತ್ವವೂ ಕೂಡ ನಮ್ಮ ಚುನಾವಣಾ ಅಜೆಂಡಾ ಆಗಬೇಕು.ರಾಜ್ಯದಲ್ಲಿ ಕೇಸರಿ ಗಾಳಿ.ದೇಶದಲ್ಲಿ ಬೀಸುತ್ತಿರುವುದು ಬಿಜೆಪಿ ಗಾಳಿ ದೇಶದ ಜನರು ಮೋದಿ ಮತ್ತೊಮ್ಮೆ ಮತ್ತೊಮ್ಮೆ ಎನ್ನುತ್ತಿದ್ದಾರೆ.ಈ ಚುನಾಚಣೆ ರಾಷ್ಟ್ರಭಕ್ತರ ಹಾಗೂ ತುಕ್ಡೆ ಗ್ಯಾಂಗ್ ನಡುವಿನ ಚುನಾವಣೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಜಾತಿ, ಮತ್ತು ನೀತಿ ನಡುವೆ ನೀತಿ ಗೆಲ್ಲಬೇಕು
ತುಕ್ಡೆ ಗ್ಯಾಂಗ್ ಗಳು ಸದನದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುತ್ತಾರೆ.ನಾವು ಭಾರತ್ ಮಾತಾಕೀ ಜೈ ಎನ್ನುತ್ತೇವೆ. ಜಾತಿ, ಮತ್ತು ನೀತಿ ನಡುವೆ ನೀತಿ ಗೆಲ್ಲಬೇಕು.ಅಂಬೇಡ್ಕರ್ ವಾದ ಗೆಲ್ಲಬೇಕು. ವಿಶ್ವ ಗುರು ಭಾರತ ಆಗಬೇಕು ಹೀಗಾಗಿ ಬಿಜೆಪಿಗೆ ಮತ ಹಾಕಬೇಕು.ಚುನಾವಣೆಗೆ ಕೆಲವೇ ದಿನಗಳು ಇವೆ.ಕೇವಲ ನೀವೆಲ್ಲಾ ಮತದಾನಿಗಳಾಗಬಾರದುಚುನಾವಣಾ ಸೇನಾನಿಗಳಾಗಬೇಕು.ನೀವು ಚುನಾವಣೆ ವಾರಿಯರ್ ಗಳಾಗಬೇಕು.ನೀವೆಲ್ಲಾ ಮೋದಿಯವರಿಗೆ ಎಲ್ಲರಿಂದ ಮತ ಹಾಕಿಸಿ ಎಂದು ಅವರು ಮತಯಾಚನೆ ಮಾಡಿದ್ದರು.