Monday, May 20, 2024

ನಾನು ಎನ್ನುವುದಕ್ಕಿಂತ ಬಿಜೆಪಿ ಪಕ್ಷವೇ ನನಗೆ ಮುಖ್ಯ : ಸುಮಲತಾ

ನವದೆಹಲಿ : ನಾನು ಎನ್ನುವುದಕ್ಕಿಂತ ಬಿಜೆಪಿ ಪಕ್ಷವೇ ನನಗೆ ಮುಖ್ಯ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ನವದೆಹಲಿಯಲ್ಲಿ ಜೆ.ಪಿ. ನಡ್ಡಾ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯವನ್ನು ಬಿಜೆಪಿ ಉಳಿಸಿಕೊಂಡ್ರೆ ಬೇಸ್ ಮಾಡಬಹುದು ಎಂದು ತಿಳಿಸಿದರು.

ಮೊದಲ ಸಂಸದೆಯಾಗಿ ಬಿಜೆಪಿಯಿಂದ ಸ್ಪರ್ಧೆ ಮಾಡಬಹುದು ಎಂಬ ನಿರೀಕ್ಷೆಯಿದೆ. ಕ್ಷೇತ್ರ ಬದಲಾವಣೆ ಬಗ್ಗೆ ಯಾವುದು ಸತ್ಯ ಅಲ್ಲ. ಕಳೆದ ಬಾರಿ ಸ್ಪರ್ಧೆ ಮಾಡಿದ್ದು ನನ್ನ ಸ್ವಂತ ನಿರ್ಧಾರ ಆಗಿರಲಿಲ್ಲ. ಕಳೆದ ಸಲ ಅಂಬರೀಶ್ ಅಭಿಮಾನಿಗಳ ಒಪ್ಪಿಗೆ ಮೇರೆಗೆ ನಾನು ಸ್ಪರ್ಧೆ ಮಾಡಿದ್ದೆ. ಕಳೆದ ಸಲ ಬಿಜೆಪಿಗೆ ಬಾಹ್ಯ ಬೆಂಬಲ ಕೊಟ್ಟಿದ್ದು ಕೂಡ ಬೆಂಬಲಿಗರ ಸಲಹೆ ಮೇರೆಗೆ ಎಂದು ಹೇಳಿದರು.

ಬಿಜೆಪಿಗೆ ಯಾವಾಗ ಸೇರುತ್ತೀರಾ?

ಬಿಜೆಪಿಗೆ ಸುಮಲತಾ ಅಂಬರೀಶ್ ಯಾವಾಗ ಸೇರುತ್ತಾರೆ ಎಂಬ ಪ್ರಶ್ನೆಗೆ, ಬಿಜೆಪಿ ಪಕ್ಷಕ್ಕೆ ಸೇರಲೇಬೇಕು. ಸಂಸತ್ ಅವಧಿ ಬಳಿಕನಾ ಹೇಗೆ ಅಂತ ಪಕ್ಷ ನಿರ್ಧಾರ ಮಾಡುತ್ತದೆ. ಮಂಡ್ಯ ಅನ್ನೋದು ಇಬ್ಬರಿಗೂ ಸವಾಲಾಗಿತ್ತು. ಹಾಗಾಗಿ, ಅವರು ಕೂಡ ಬಿಟ್ಟು ಕೊಡಲು ಒಪ್ಪಿಲ್ಲ. ಇವತ್ತು ಸಿಇಸಿ ಸಭೆ ಇದೆ, ಬಳಿಕ ನಾನು ಮಾತನಾಡ್ತೇನೆ ಎಂದು ತಿಳಿಸಿದರು.

ಜೆಡಿಎಸ್​ಗೆ ಬೆಂಬಲ ಕೊಡ್ತೀರಾ?

ಜೆಡಿಎಸ್​ಗೆ ಬೆಂಬಲ ಕೊಡುವ ವಿಚಾರವಾಗಿ ಮಾತನಾಡಿ, ಹೈ ಕಮಾಂಡ್ ಕರೆ ಹಿನ್ನೆಲೆ ದೆಹಲಿಗೆ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷ ಹೇಗೆ ನಡೆಸಿಕೊಳ್ಳುತ್ತೆ ಎನ್ನುವುದು ಮುಖ್ಯ. ನಂತರ ಬೆಂಬಲಿಗರ ಸಭೆ ಮಾಡಿ ನಿರ್ಧಾರ ಮಾಡ್ತೇನೆ ಎಂದು ಸುಮಲತಾ ಅಂಬರೀಶ್ ಹೇಳಿದರು.

RELATED ARTICLES

Related Articles

TRENDING ARTICLES