Friday, May 3, 2024

ಮೋದಿ ನನ್ನ ದೇವರು, ಪ್ರಾಣ ಹೋದ್ರೂ ಮೋದಿನ ಬಿಡಲ್ಲ, ನಾಳೆ ಮೋದಿ ಭೇಟಿ ಮಾಡಲ್ಲ : ಈಶ್ವರಪ್ಪ

ಶಿವಮೊಗ್ಗ : ಪ್ರಧಾನಿ ಮೋದಿ ನನ್ನ ದೇವರು. ಪ್ರಾಣ ಹೋದರು ಮೋದಿನ ಬಿಡಲ್ಲ. ನಾಳಿನ ಮೋದಿ ಕಾರ್ಯಕ್ರಮಕ್ಕೂ ಹೋಗಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಪರವಾಗಿ ನಾನು ಧ್ವನಿ ಎತ್ತುತ್ತಿದ್ದೇನೆ. ನಾನು ನಾಳೆ ಮೋದಿ ಭೇಟಿ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

ಕಾರ್ಯಕರ್ತರ ಪರವಾಗಿ ಧ್ವನಿಯಾಗುತ್ತಾ ಇದ್ದೀನಿ. ಯಡಿಯೂರಪ್ಪ ಹೇಳ್ತಾ ಇರಬಹುದು, ಟಿಕೆಟ್ ಯಾಕೆ ತಪ್ಪಿಸಿದ್ರಿ ಯಡಿಯೂರಪ್ಪನವರೇ? ಮತ್ತೆ ಶೋಭಾಗೆ ಯಾಕೆ ಟಿಕೆಟ್ ಕೊಡಿಸಿದ್ರಿ? ಇದರ ವಿರುದ್ಧ ನಾನು ಚುನಾವಣೆಗೆ ಸ್ಪರ್ಧೆ ಮಾಡ್ತಾ ಇದ್ದೇನೆ ಎಂದು ಕಿಡಿಕಾರಿದರು.

ಯಾಕೆ ರಾಜ್ಯದಲ್ಲಿ ಕುರುಬರು ಇಲ್ವಾ?

ಹಿಂದುತ್ವ ಪರವಾಗಿ ಮಾತನಾಡುತ್ತಿದ್ದೇವೆ, ಅವರನ್ನ ತುಳಿಯುತ್ತಾ ಇದ್ದಾರೆ. ಎಲ್ಲರ ಮೇಲೆ ತುಳಿಯುತ್ತಿದ್ದಾರೆ. ಕುರುಬರಿಗೆ ಒಂದೇ ಒಂದು ಟಿಕೆಟ್ ಕೊಡ್ತಾ ಇಲ್ಲ. ಯಾಕೆ ರಾಜ್ಯದಲ್ಲಿ ಕುರುಬರು ಇಲ್ವಾ? ಯಾರೇ ಬಂದ್ರು ನಾನು ಚುನಾವಣೆ ಹಿಂದೆ ಸರಿಯಲ್ಲ ಎಂದು ಗುಡುಗಿದರು.

ವಿಜಯೇಂದ್ರರದ್ದೇ ಕಾರುಬಾರು ಆಗಿದೆ

ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರರದ್ದೇ ಕಾರುಬಾರು ಆಗಿ ಹೋಗಿದೆ. ನೊಂದ ಕಾರ್ಯಕರ್ತರು ಇವರಿಂದ ನಲುಗಿ ಹೋಗಿದ್ದಾರೆ. ಅವರಿಬ್ಬರ ಕಪಿ ಮುಷ್ಠಿಯಲ್ಲಿ ಬಿಜೆಪಿ ಪಕ್ಷ ಇದೆ. ರಾಜ್ಯದಲ್ಲಿ ನೊಂದ ಕಾರ್ಯಕರ್ತರು ನನಗೆ ಫೋನಾಯಿಸಿ ಕೇಳುತ್ತಿದ್ದಾರೆ. ಏನು ಸಾರ್ ಇದು ಕೆಟ್ಟ ರಾಜಕಾರಣ ನಡಿತಿದೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಹೀಗಾಗಿ, ನಾನು ಈ ಕೆಟ್ಟ ರಾಜಕಾರಣದ ವಿರುದ್ಧ ಚುನಾವಣೆಗೆ ಸ್ಪರ್ದಿಸುತ್ತಿದ್ದೇನೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES