ತುಮಕೂರು: ನಾನು ಮೋದಿ ಮುಖ ನೋಡಿ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಲ್ಲ ಎಂದು ಬಿಜೆಪಿ ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರತಾಪ್ ಸಿಂಹ, ಸಿ.ಟಿ.ರವಿ ಮುಖ ನೋಡಿ ಕೆಲಸ ಮಾಡಬಹುದು. ಆದರೆ ನಾನು ಮೋದಿ ಮುಖ ನೋಡಿ ಕೆಲಸ ಮಾಡಲ್ಲ.ನನಗೆ ಮೋದಿ, ಅಮಿತ್ ಶಾ ಅವರ ಮೇಲೆ ಅಪಾರ ಗೌರವವಿದೆ.ಆದರೆ ವಿ.ಸೋಮಣ್ಣ ಹೊರಗಿನಿಂದ ಬಂದವರು ಅವರು ಗೆಲ್ಲೋದು ನನಗೆ ಸಂಸದ ಬಸವರಾಜು ಇಷ್ಟವಿಲ್ಲ.ಇಲ್ಲಿಯ ಮತದಾರರಿಗೆ ಇಷ್ಟವಿಲ್ಲ ಯಾವುದೇ ಕಾರಣಕ್ಕೂ ನಾನು ಸೋಮಣ್ಣ ಪರ ಕೆಲಸ ಮಾಡಲ್ಲ ಎಂದು ಕಿಡಿಕಾರಿದ್ದಾರೆ.
ನಾನು ಯಾರಿಗೂ ಹೋಗಿ ಲೋಕಸಭೆ ಟಿಕೆಟ್ ಕೇಳಿಲ್ಲ.ಯಡಿಯೂರಪ್ಪನವರೇ ನನ್ನನ್ನ ಮೂರ್ನಾಲ್ಕು ಬಾರಿ ಕರೆಸಿ,ಟಿಕೆಟ್ ಕೊಡೋದಾಗಿ ನನಗೆ ಆಸೆ ಹುಟ್ಟಿಸಿದ್ದರು.ನಾನು ಸಾಕ್ಷಿ ಕೂಡ ಇಟ್ಟುಕೊಂಡಿದ್ದೀನಿ.ನಾನು ದೇವರನ್ನೇ ಒಪ್ಪದೋನು.ಅವರು ಅಷ್ಟೆಲ್ಲ ಹೇಳಿದ ಮೇಲೆ ಅವರ ಮೇಲೆ ನಂಬಿಕೆ ಇಟ್ಟುಕೊಂಡು ಕೂತಿದ್ದೆ.ಗಣೇಶನ ಥರ ಅವರ ಸುತ್ತ ಸುತ್ತುತ್ತೀನಿ ಅಂದಿದ್ದೆ.ಈಗ ಟಿಕೆಟ್ ಕೊಡಿಸುವಲ್ಲಿ ಅವರು ವಿಫಲರಾಗಿದ್ದಾರೆ. ನನ್ನನ್ನ ನಡುದಾರಿಯಲ್ಲಿ ಕೈ ಬಿಟ್ಟಿದ್ದಾರೆ.ಅಪ್ಪ ಮಕ್ಕಳ ಅಸ್ಥಿತ್ವಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಎಂದು ಯಡಿಯೂರಪ್ಪನ ಮೇಳೆ ಬೇಸರ ವ್ಯಕ್ತಪಡಿಸಿದ್ದಾರೆ.