Monday, May 20, 2024

ಡಾ.ಮಂಜುನಾಥ್​ ಬಗ್ಗೆ ಮಾತಾಡೋ ಯೋಗ್ಯತೆ ನಿಮಗಿಲ್ಲ: ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಡಾ.ಮಂಜುನಾಥ್​ ಬಗ್ಗೆ ಮಾತಾಡೋ ಯೋಗ್ಯತೆ ನಿಮಗಿಲ್ಲ ಅವರ ಸಂಸ್ಕೃತಿ,ಸೇವೆ ಮುಂದೆ ಉಂಗುರಿನಷ್ಟು ಕೂಡ ಸಮಾನರಲ್ಲ.ನೀವು ಗೆದ್ದಿರಬಹುದು ಆದರೆ ಅವರ ಸಾಧನೆ ಏನು? ಮೊದಲು ಅರಿತುಕೊಳ್ಳಲಿ ಎಂದು ಹೆಚ್​.ಡಿ ಕುಮಾರಸ್ವಾಮಿ ಟಾಂಗ್​ ನೀಡಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಡಾ.ಮಂಜುನಾಥ ಅವರು ರಾಜಕೀಯಕ್ಕೆ ಬರಬೇಕು ಅಂತ ಇರಲಿಲ್ಲ.ದೆಹಲಿಯ ಹೈಕಮಾಂಡ್ ಒತ್ತಡ ಹಾಕಿ ಡಾ.ಮಂಜುನಾಥ ಒಪ್ಪಿಸಬೇಕು ಅಂತ ಒತ್ತಡ ಹಾಕಿದ್ದಾರೆ.
ಇವತ್ತು ಅವರ ಬಗ್ಗೆ ಎದುರಾಳಿ ಸಣ್ಣತನದಲ್ಲಿ ಮಾತಾಡಿದ್ದಾರೆ ನಾನು ಅದನ್ನ ಗಮನಿಸಿದ್ದೇನೆ ಎಂದರು.

17 ವರ್ಷಗಳ ಸೇವೆ ಮಾಡಿದ್ದಾರೆ 2 ಸಾವಿರ‌ ಬೆಡ್ ಇದೆ. ನಮ್ಮ ಬಗ್ಗೆ ಮಾತನಾಡಿ, ರಾಜಕೀಯವಾಗಿ ಎದುರಿಸುತ್ತೇವೆ.ಇವತ್ತಿ ಆ ವ್ಯಕ್ತಿ ಮಾತು ಕೇಳಿ ಬಹಳ ನೋವು ಆಯ್ತು ನನ್ನ ತಂಗಿ ಅವರ ಮಗ ಹೇಳಿದ್ದರು. ಮೊನ್ನೆ ಕೆಟ್ಟ ರೀತಿ ಪ್ರಶ್ನೆ ಮಾಡ್ತಾ ಯಾಕೆ ಈ ತೀರ್ಮಾನ ಮಾಡಿದ್ರಿ, ನಮಗೆ ರಾಜಕೀಯ ಅವಶ್ಯಕತೆ ಇಲ್ಲ, ನಾವು ನೆಮ್ಮದಿ ಅಂದ್ರು ಅವರಿಂದ‌ ದೇಶಕ್ಕೆ ದೊಡ್ಡ ಸೇವೆ‌ಬೇಕು ಅಂತ ನಿಲ್ಲಿಸಿಕೊಂಡಿದ್ದಾರೆ ನನ್ನ ಮನಸ್ಸಿನಲ್ಲಿ‌ ಬಂದಿದೆ. ನಾವು ರಾಜಕೀಯದಲ್ಲಿ ಇದ್ದೀವಿ ,ನಮ್ಮ ಬಗ್ಗೆ ಏನಾದ್ರು ಮಾತಾಡಿ ಎಷ್ಟು ಮನೆಗಳನ್ನ ಹಾಳು ಮಾಡಿದ್ದೀರಾ ನೋಡಿದ್ದೀನಿ ನಿಮ್ಮನ್ನು ಎಂದು ಟಾಂಗ್​ ಕೊಟ್ಟರು.

ಮಂಜುನಾಥ ಬಿಜೆಪಿಯಿಂದ ಅಭ್ಯರ್ಥಿ ಆಗಿ ಅಂತ ಸೂಚನೆ ಕೊಟ್ಟಿದ್ದು ನಾನೇ
ಎರಡು ಗಂಟೆಗಳ ಚರ್ಚೆ ಮಾಡಿ ನಾನು ಬಿಜೆಪಿಗೆ ಸೇರಿ ಎಂದು ಒಪ್ಪಿಸಿದ್ದೇನೆ.ನಮ್ಮ ಪಕ್ಷ ಹಿನ್ನಡೆ ಆಗಲಿಕ್ಕೆ ಬಿಡಲ್ಲ ಮಾಡೋಕೆ ಆಗಲ್ಲ ನಾನು ದೂರದೃಷ್ಟಿ ಇಟ್ಟುಕೊಂಡಿದ್ದೇನೆ.18 ಲಕ್ಷ ನಗರ ಭಾಗದಲ್ಲಿ ಮತದಾರರು ಇದ್ದಾರೆ ಗ್ರಾಮೀಣ ಭಾಗದಲ್ಲಿ 11 ಲಕ್ಷ ಮತದಾರು ಇದ್ದಾರೆ. ಈ ಭಾಗದಲ್ಲಿರುವ ಮತದಾರು ಉತ್ತರ ಭಾರತರಿಂದ ಬಂದಿದ್ದಾರೆ ಅವರಿಗೆ ನಮ್ಮ ಚಿನ್ಹೆ ಗೊತ್ತಿರಲ್ಲ.ಅದೆಲ್ಲ ಲೆಕ್ಕಾಚಾರ ಹಾಕಿ,ನಾನು ಸೂಚನೆ ನೀಡಿದ್ದೇನೆ ಎಮದರು.

ಅವನ ಹೆಸರು ಹೇಳೋಕೆ ಇಷ್ಟ ಇಲ್ಲ
ಮಂಜುನಾಥ ಬಗ್ಗೆ ಅವರು ಯಾರೂ ಕೆಟ್ಟ ರೀತಿ ಹೇಳಿಕೆ‌ ಕೊಟ್ಟಿದ್ದಾನೆ ಅವನು ಯಾವನೂ
ರಾಮನಗರ ಜಿಲ್ಲೆ ಅಭಿವೃದ್ಧಿ ಮಾಡಿದವನು ಅವನ ಹೆಸರು ಹೇಳೋಕೆ ಇಷ್ಟ ಇಲ್ಲ ನನಗೆ
ಅವರು ಚುನಾವಣಾ ಗೆಲ್ಲಬೇಕು ಉತ್ತಮವಾದ ವ್ಯಕ್ತಿ ಸಮಾಜಕ್ಕೆ ನೀಡಬೇಕು ಅದಕ್ಕೆ ತೀರ್ಮಾನ ಮಾಡಿದ್ದು
ಚುನಾವಣೆ ಎದುರಿಸಲು ಸಿದ್ಧವಾಗಿದ್ದೇವೆ. ಜನರು ತಕ್ಕ ಪಾಠ ಕಲಿಸ್ತಾರೆ ಎಂದು ಡಿಕೆ ಸುರೇಶ್ ಹೆಸರು ಹೇಳದೆ ಏಕವಚನಲ್ಲಿ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES