Tuesday, May 21, 2024

ಹೆಗಡೆ ಅಲ್ಲ ಅವರಪ್ಪ ಹುಟ್ಟಿ ಬಂದ್ರೂ ಸಂವಿಧಾನ ಮುಟ್ಟೋದಕ್ಕೂ ಆಗಲ್ಲ: ರಾಜೂಗೌಡ

ಯಾದಗಿರಿ: ಅನಂತ್‌ ಕುಮಾರ್‌ ಹೆಗಡೆ ಅಲ್ಲ ಅವರಪ್ಪ ಹುಟ್ಟಿ ಬಂದ್ರೂ ಸಂವಿಧಾನ ಮುಟ್ಟೋದಕ್ಕೆ ಆಗಲ್ಲ ಎಂದು ಸ್ವಪಕ್ಷದ ನಾಯಕ ಮೇಲೆಯೇ ಏಕವಚನದಲ್ಲೇ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಜಿ ಸಚಿವ ರಾಜೂಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುರಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಫಲಾನುಭವಿಗಳ ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,ಅವನ್ಯಾರೋ ಅಲ್ಲಿದ್ದು ಸಂವಿಧಾನದ ಬಗ್ಗೆ ಮಾತಾಡ್ತಾನೆ.ಸಂವಿಧಾನ ಚೇಂಜ್‌ ಮಾಡ್ತೀವಿ ಅಂತಾ ಹೇಳಿದ್ದಾನೆ. ಹೆಗಡೆ ಅಲ್ಲ ಅವರಪ್ಪ ಹುಟ್ಟಿ ಬಂದ್ರೂ ಸಂವಿಧಾನಕ್ಕೆ ಏನು ಮಾಡಕಾಗಲ್ಲ. ಸಂವಿಧಾನ ಮುಟ್ಟುವುದಕ್ಕೂ ಆಗಲ್ಲ. ಚೇಂಜ್‌ ಮಾಡೋಕೂ ಆಗಲ್ಲ ಎಂದು ಸಂಸದ ಅನಂತ್‌ ಕುಮಾರ್‌ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ್ದಾರೆ

ಅಂಬೇಡ್ಕರ್ ಬರೆದವನ್ನು ಮೋದಿ ಅವ್ರು ರಕ್ಷಣೆ ಮಾಡ್ತಿದ್ದಾರೆ. ಸಂವಿಧಾನವನ್ನು ತಲೆ ಮೇಲೆ ಇಟ್ಕೊಂಡು ಹೋಗುವಂತಹ ಕೆಲಸ ಮೋದಿ, ಬಿಜೆಪಿ ಮಾಡಿದೆ ಎಂದು ಹೇಳಿದರು.

ಇದನ್ನೂ ಓದಿ: ಶೋಭ ಮೇಲೆ ಇದ್ದ ಆಸಕ್ತಿ ನನ್ನ ಮಗನ ಮೇಲೆ ಇಲ್ಲ: ಕೆ.ಎಸ್​ ಈಶ್ವರಪ್ಪ

ಒಳ ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳವನ್ನು ಬಿಜೆಪಿ ಸರ್ಕಾರ ಮಾಡಿದೆ. ಎಲ್ಲೋ ನಿಂತು ಒಳ ಮೀಸಲಾತಿ ಮಾಡಿದ್ರು. ನಾನು ನಿಮ್ಮ ಪರ ನಿಂತೆ. ಆದ್ರೆ ಅದರ ಏಟು ನನಗೆ ಬಿತ್ತು ಎಂದು ಸಭೆಯಲ್ಲಿ ನೋವು ತೋಡಿಕೊಂಡರು.

ನಮ್ಮ ಬಿಜೆಪಿಯ ಕೆಲವು ನಾಯಕರು ಕೆಲವೊಂದು ಹುಚ್ಚುಚ್ಚು ಭಾಷಣ ಮಾಡಿ ಗೆದ್ದು ಬಿಡ್ತವೆ. ಗೆದ್ದು 4 ವರ್ಷದಿಂದ ಮಾಯ ಆಗ್ತಾರೆ. ಕೊನೆಯ 15 ದಿನದಲ್ಲಿ ಬಂದು ಬಾಯಿಗೆ ಬಂದಂಗೆ ಮಾತಾಡ್ತಾರೆ. ಹುಚ್ಚುಚ್ಚು ಮಾತಾಡುವಂತವರಿಗೆ ಬಿಜೆಪಿ ಏನು ಶಿಕ್ಷೆ ಕೊಡಬೇಕು ಕೊಡುತ್ತದೆ. ಬಾಯಿ ಮಾತಿನಿಂದ ಕೊಡಲ್ಲ, ಕಾದು ನೋಡಿ ಗೊತ್ತಾಗ್ತದೆ ಎಂದು ತಿರುಗೇಟು ಕೊಟ್ಟರು.

RELATED ARTICLES

Related Articles

TRENDING ARTICLES