Saturday, May 4, 2024

ಮಾತು ಕೊಟ್ಟು ಕೈ ಕೊಟ್ಟ ಮೋಸಗಾರ ಬಿ.ಎಸ್​. ಯಡಿಯೂರಪ್ಪ: ಕೆ.ಎಸ್​ ಈಶ್ವರಪ್ಪ

ಬೆಂಗಳೂರು: ನನ್ನ ಮಗನಿಗೆ ಯಡಿಯೂರಪ್ಪ ಮೋಸ ಮಾಡಿದ್ದಾರೆ. ರಾಜ್ಯದಲ್ಲಿ ತಂದೆ ಮಕ್ಕಳ ಆಟ ಹೆಚ್ಚಾಗಿದೆ ಎಂದು ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೋಭಾ ಏನು ಕೇಂದ್ರ ಕೇಂದ್ರ ನಾಯಕರನ್ನ ಭೇಟಿಯಾಗಿ ಟಿಕೆಟ್ ಕೇಳಿದ್ಲಾ ನಡ್ಡಾ ಮೋದಿ ಅಮಿತ್ ಶಾ ರನ್ನ ಭೇಟಿಯಾಗಿದ್ರಾ ಇಲ್ಲ ತಾನೆ ಅದನ್ನ ಕೊಡಿಸಿರೋದು ಯಡಿಯೂರಪ್ಪ.ಶೋಭ ಮೇಲೆ ಇದ್ದ ಆಸಕ್ತಿ ನನ್ನ ಮಗನ ಮೇಲೆ ಇಲ್ಲವೇ ಇಲ್ಲ ಅವರು ನನಗೆ ಮೋಸ ಮಾಡಿದ್ದಾರೆ ಎಂದರು.

ನನ್ನ ಮಗ ಹಾವೇರಿಯಲ್ಲಿ ಮನೆ‌ಮನೆ ಸುತ್ತಿ ಚುನಾವಣಾ ತಯಾರಿ ನಡೆಸಿದ್ದ.ಇನ್ನೇನು ಗೆದ್ದೇ ಬಿಡ್ತಾನೆ ಅನ್ನೋ ಟೈಮ್ ನಲ್ಲಿ ಟಿಕೆಟ್ ತಪ್ಪಿಸಿದ್ದಾರೆ.ನನ್ನ ಮಗನಿಗೆ ಯಾವ ಎಂ.ಎಲ್.ಸಿ‌ ನೂ ಬೇಕಿಲ್ಲ.ಪಾಪ ಬೊಮ್ಮಾಯಿನೇ ನನಗೆ ಟಿಕೆಟ್ ಬೇಡ ಕಾಂತೇಶ್ ಗೆ ಕೊಡಿ ಅಂತಾನೂ ಹೇಳಿದ್ದರು ಬೇಕು ಅಂತಲೇ ಬೊಮ್ಮಾಯಿಗೆ ಟಿಕೆಟ್ ಕೊಟ್ಟಿದ್ದಾರೆ ಶೋಭ ಮೇಲೆ ಇದ್ದ ಆಸಕ್ತಿ ನನ್ನ ಮಗನ ಮೇಲೆ ಇಲ್ಲ. ನನ್ನ ಮಗನನ್ನಂತು ಚುನಾವಣೆಗೆ ನಿಲ್ಲಿಸೋದು ಗ್ಯಾರಂಟಿ ಎಂದು ಕಿಡಿಕಾರಿದ್ದಾರೆ.

ನಾನು ಯಾವ ಕೇಂದ್ರ ನಾಯಕರನ್ನೂ ಭೇಟಿಯಾಗಲ್ಲ. ನಾನು ನನ್ನ ಜನರನ್ನ ನಾಳೆ ಭೇಟಿಯಾಗ್ತೇನೆ. ಮುಖಂಡರು ಹಿತೈಷಿಗಳ ಸಲಹೆ ಪಡೆದು ನಾಳೆ ಸಂಜೆ 5 ಗಂಟೆಗೆ ಅಂತಿಮ ತೀರ್ಮಾನ ತಿಳಿಸುತ್ತೇನೆ ಎಂದರು.

ಚಿಕ್ಕ ಮಗಳೂರಿನಲ್ಲಿ ಗೋ ಬ್ಯಾಕ್ ಶೋಭಾ ಅಭಿಯಾನ ಆರಂಭ ವಾಯ್ತು ಅದ್ರಿಂದ ಅಲ್ಲಿಂದ ಟಿಕೆಟ್ ಮುಸ್ಸಾಗಿದ್ದನ್ನ ಸದಾನಂದ ಗೌಡರಿಗೆ ತಪ್ಪಿಸಿ ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆಗೆ ನೀಡಿದ್ದಾರೆ
ಅವರಿಗೆ ಅವರ ಕುಟುಂಬವೇ ಹೆಚ್ಚು.
ಕೊಟ್ಟ ಮಾತನ್ನ ಯಡಿಯೂರಪ್ಪ ಉಳಿಸಿಕೊಂಡಿಲ್ಲ
ನನ್ನ ಮಂತ್ರಿ ಸ್ಥಾನ ಹೋಯ್ತು.ನನ್ನ ಮಗನಿಗೆ ಎಂ.ಪಿ‌ ಟಿಕೆಟ್ ಹೋಯ್ತ ನನಗೆ ಕ್ಲೀನ್ ಚಿಟ್ ಸಿಕ್ಕಿದ ಮೇಲೆ ಮೂರು ದಿನದಲ್ಲಿ ಮಂತ್ರಿ ಮಾಡ್ತೀನಿ ಅಂದ್ರು ಮಾಡಿಲ್ಲ ಕೊಟ್ಟ ಮಾತನ್ನ ಯಡಿಯೂರಪ್ಪ ಉಳಿಸಿಕೊಂಡಿಲ್ಲ ಎಂದು ತ್ರೀವ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

RELATED ARTICLES

Related Articles

TRENDING ARTICLES