ಬೆಂಗಳೂರು: ನನ್ನ ಮಗನಿಗೆ ಯಡಿಯೂರಪ್ಪ ಮೋಸ ಮಾಡಿದ್ದಾರೆ. ರಾಜ್ಯದಲ್ಲಿ ತಂದೆ ಮಕ್ಕಳ ಆಟ ಹೆಚ್ಚಾಗಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೋಭಾ ಏನು ಕೇಂದ್ರ ಕೇಂದ್ರ ನಾಯಕರನ್ನ ಭೇಟಿಯಾಗಿ ಟಿಕೆಟ್ ಕೇಳಿದ್ಲಾ ನಡ್ಡಾ ಮೋದಿ ಅಮಿತ್ ಶಾ ರನ್ನ ಭೇಟಿಯಾಗಿದ್ರಾ ಇಲ್ಲ ತಾನೆ ಅದನ್ನ ಕೊಡಿಸಿರೋದು ಯಡಿಯೂರಪ್ಪ.ಶೋಭ ಮೇಲೆ ಇದ್ದ ಆಸಕ್ತಿ ನನ್ನ ಮಗನ ಮೇಲೆ ಇಲ್ಲವೇ ಇಲ್ಲ ಅವರು ನನಗೆ ಮೋಸ ಮಾಡಿದ್ದಾರೆ ಎಂದರು.
ನನ್ನ ಮಗ ಹಾವೇರಿಯಲ್ಲಿ ಮನೆಮನೆ ಸುತ್ತಿ ಚುನಾವಣಾ ತಯಾರಿ ನಡೆಸಿದ್ದ.ಇನ್ನೇನು ಗೆದ್ದೇ ಬಿಡ್ತಾನೆ ಅನ್ನೋ ಟೈಮ್ ನಲ್ಲಿ ಟಿಕೆಟ್ ತಪ್ಪಿಸಿದ್ದಾರೆ.ನನ್ನ ಮಗನಿಗೆ ಯಾವ ಎಂ.ಎಲ್.ಸಿ ನೂ ಬೇಕಿಲ್ಲ.ಪಾಪ ಬೊಮ್ಮಾಯಿನೇ ನನಗೆ ಟಿಕೆಟ್ ಬೇಡ ಕಾಂತೇಶ್ ಗೆ ಕೊಡಿ ಅಂತಾನೂ ಹೇಳಿದ್ದರು ಬೇಕು ಅಂತಲೇ ಬೊಮ್ಮಾಯಿಗೆ ಟಿಕೆಟ್ ಕೊಟ್ಟಿದ್ದಾರೆ ಶೋಭ ಮೇಲೆ ಇದ್ದ ಆಸಕ್ತಿ ನನ್ನ ಮಗನ ಮೇಲೆ ಇಲ್ಲ. ನನ್ನ ಮಗನನ್ನಂತು ಚುನಾವಣೆಗೆ ನಿಲ್ಲಿಸೋದು ಗ್ಯಾರಂಟಿ ಎಂದು ಕಿಡಿಕಾರಿದ್ದಾರೆ.
ನಾನು ಯಾವ ಕೇಂದ್ರ ನಾಯಕರನ್ನೂ ಭೇಟಿಯಾಗಲ್ಲ. ನಾನು ನನ್ನ ಜನರನ್ನ ನಾಳೆ ಭೇಟಿಯಾಗ್ತೇನೆ. ಮುಖಂಡರು ಹಿತೈಷಿಗಳ ಸಲಹೆ ಪಡೆದು ನಾಳೆ ಸಂಜೆ 5 ಗಂಟೆಗೆ ಅಂತಿಮ ತೀರ್ಮಾನ ತಿಳಿಸುತ್ತೇನೆ ಎಂದರು.
ಅವರಿಗೆ ಅವರ ಕುಟುಂಬವೇ ಹೆಚ್ಚು.