ವಿಜಯಪುರ: ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿ ಬಿಡಲಿ ಮೋದಿ ಗೆಲ್ಲಿಸೋದು ಒಂದೇ ನಮ್ಮ ಗುರಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಟಿಕೆಟ್ ನೀಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ ವಿದೇಶಗಳಲ್ಲಿ ಪ್ರಧಾನಿಗಳಿಗೆ ಮರ್ಯಾದೆ ಸಿಗುತ್ತಿರಲಿಲ್ಲ. ಆದ್ರೆ ಇದೀಗ ಎಲ್ಲೆಡೆ ಎದ್ದು ನಿಂತು ಗೌರವ ಕೊಡ್ತಿದ್ದಾರೆ ಇದಕೆಲ್ಲಾ ಕಾರಣ ನಮ್ಮ ಪ್ರಧಾನಿ ಮೋದಿ ಹಾಗಿಯೇ ಅವರೇ ಮತ್ತೆ ಗೆದ್ದು ಪ್ರಧಾನಿಯಾಗಬೇಕು ಅವರನ್ನೂ ಗೆಲ್ಲಿಸೋದೇ ನಮ್ಮ ಗುರಿ ಎಂದು ಹೇಳಿದ್ದಾರೆ.
ನಮ್ಮ ರಾಗಿ, ಜೋಳಕ್ಕೆ ಅಂತರಾಷ್ಟ್ರೀಯ ಮಾನ್ಯತೆ ಕೊಡಿಸಿದ್ದು ಮೋದಿ. ಅಭಿವೃದ್ಧಿ ಆಧಾರದ ಮೇಲೆ ನಾವು ಈ ಸಲ ನಮ್ಮ ನಮ್ಮ ಕ್ಷೇತ್ರದ ಅಭಿವೃದ್ಧಿ ಆಧಾರದ ಮೇಲೆ ಓಟು ಕೇಳ್ತೇವೆ.ಯಾರಿಗೆ ಟಿಕೇಟ್ ಕೊಟ್ಟರು ಕೆಲಸ ಮಾಡ್ತೇವೆ ಎಂದರು
ಟಿಕೆಟ್ ಗೊಂದಲ ವಿಚಾರವಾಗಿ ಮಾತನಾಡಿದ ಅವರು, ಟಿಕೆಟ್ ವಿಚಾರದಲ್ಲಿ ಗೊಂದಲ ಇರೋದು ನಿಜ.ನಮ್ಮದು ಸಂಘ ಪರಿವಾರ ಗಟ್ಟಿ ಇರುವ ಜಿಲ್ಲೆ.ಯಾರಿಗೆ ಟಿಕೆಟ್ ಕೊಟ್ಟರು ಗೆಲ್ಲಬಹುದು, ಹೀಗಾಗಿ ಬೇರೆಯವರು ಟಿಕೇಟ್ ಕೇಳ್ತಿದ್ದಾರೆ. ನನಗೆ ಎರಡು ಬಾರಿ ಟಿಕೇಟ್ ಕೊಟ್ಟಿದ್ದಾರೆ, ಇನ್ನೊಬ್ಬರಿಗೆ ಅವಮಾನ ಮಾಡಿ ಟಿಕೇಟ್ ಕೇಳಬಾರದು.ಅದು ನನ್ನ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಕಿಡಿಕಾರಿದ್ದರು.
ನನ್ನ ವಿರುದ್ಧ ಟಿಕೆಟ್ ತೆಗೆದುಕೊಳ್ಳಲು ಷಡ್ಯಂತ್ರ ಮಾಡ್ತಿದ್ದಾರೆ. ವ್ಯವಸ್ಥಿತವಾಗಿ ಒಂದು ಗುಂಪು ವಿರೋಧ ಮಾಡ್ತಿದೆ. ಇದರಿಂದ ನಾನು ವಿಚಲಿತಳಾಗಿಲ್ಲ ಎಂದರು.
ಸಿ ಟಿ ರವಿ ಟಿಕೇಟ್ ಕೇಳಿರೋದು ನಿಜ
ಸಿ ಟಿ ರವಿ ಅಪೇಕ್ಷೆ ಪಟ್ಟರು ತಪ್ಪಲ್ಲ. ಅವರು ಕೂಡ ಲೋಕಸಭೆಗೆ ಟಿಕೆಟ್ ಕೇಳಿದ್ದಾರೆ. ಕಾರ್ಯಕರ್ತರು ನನ್ನ ವಿರೋಧ ಮಾಡ್ತಿಲ್ಲ, ಒಂದು ಗುಂಪು ಮಾತ್ರ ವಿರೋಧ ಮಾಡ್ತಿದೆ. ನಾನು ಹೆತ್ತ ತಾಯಿಗೆ ದ್ರೋಹ ಮಾಡಲ್ಲ, ನಾನು ಹಿಂದೆ ಯಾರಿಗೂ ವಿರೋಧ ಮಾಡಿಲ್ಲ. ತಮ್ಮ ಸೋಲನ್ನ ಇನ್ನೊಬ್ಬರ ಮೇಲೆ ಹೊರಿಸಬಾರದು, ಅದು ತಾಯಿಗೆ ಮಾಡಿದ ದ್ರೋಹ ಎಂದು ಶೋಭಾ ಆಕ್ರೋಶ ವ್ಯಕ್ತಪಡಿಸಿದ್ದರು.