Saturday, May 11, 2024

ಟಿಕೆಟ್ ಕೈ ತಪ್ಪುವ ಆತಂಕ : ಮೋದಿಜಿ ಇಲ್ಲದೆ ನಾನೇನು? ಪ್ರತಾಪ್ ಸಿಂಹ ಅಚ್ಚರಿ ಟ್ವೀಟ್

ಬೆಂಗಳೂರು : ಈ ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸಂಸದ ಪ್ರತಾಪ್‌ ಸಿಂಹಗೆ ಕೈ ತಪ್ಪುತ್ತೆ ಎನ್ನುವ ಮಾತುಗಳು ಹೆಚ್ಚಾಗುತ್ತಿದೆ. ಹೀಗಾಗಿ, ಪ್ರತಾಪ್​ ಸಿಂಹ ಅಭಿಮಾನಿಗಳು ಪ್ರತಿಭಟನೆ ಮಾಡಿದ್ದಾರೆ.

ಮೈಸೂರು ಹಿನಕಲ್ ಫ್ಲೈ ಓವರ್ ಕೆಳಗೆ ಧರಣಿ ನಡೆಸಿದ್ದು, ಹಾಲಿ ಸಂಸದ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಅಭಿಮಾನಿಗಳು ಆಕ್ರೋಶ ಹೊರ ಹಾಕ್ತಿದ್ದಾರೆ. ಈ ಬೆನ್ನಲ್ಲೇ ಪ್ರತಾಪ್ ಸಿಂಹ ಅಚ್ಚರಿ ಟ್ವೀಟ್ ಮಾಡಿದ್ದಾರೆ.

ಆತ್ಮೀಯ ಕಾರ್ಯಕರ್ತರು ಮತ್ತು ಹಿತೈಷಿಗಳೇ, ಪ್ರೀತಿಯ ಪ್ರಧಾನಿ ನರೇಂದ್ರ ಮೋದಿಜಿ ಇಲ್ಲದೆ ನಾನೇನು? ಈ 2 ಫೋಟೋಗಳನ್ನು ನೋಡಿ ಮತ್ತು ಅರ್ಥಮಾಡಿಕೊಳ್ಳಿ. ನನ್ನ ರಾಜಕೀಯ ಅಸ್ತಿತ್ವಕ್ಕೆ ನಾನು ಮೋದಿಜಿಗೆ ಋಣಿಯಾಗಿದ್ದೇನೆ. ಪ್ರತಿಭಟನೆ ಮಾಡಬೇಡಿ ಎಂದು ನಿಮ್ಮೆಲ್ಲರಿಗೂ ವಿನಮ್ರವಾಗಿ ವಿನಂತಿಸುತ್ತೇನೆ. ನಾವೆಲ್ಲರೂ ಒಂದೇ ಕುಟುಂಬದವರು, ಮೋದಿಜಿಗಾಗಿ ಕೆಲಸ ಮಾಡೋಣ ಎಂದು ಮನವಿ ಮಾಡಿದ್ದಾರೆ.

ಯದುವೀರ್​ ಒಡೆಯರ್​ಗೆ ಟಿಕೆಟ್ ಫೈನಲ್​

ಅಲ್ಲದೆ, ಬಿಜೆಪಿ ಚುನಾವಣೆ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಇತ್ತ, ಈ ಬಾರಿ ಮೈಸೂರು ಕ್ಷೇತ್ರದ ಟಿಕೆಟ್​​ ಪ್ರತಾಪ್​ ಸಿಂಹ ಬದಲು ಯದುವೀರ್​ ಒಡೆಯರ್​ಗೆ ಫೈನಲ್​ ಆಗಿದೆ ಎಂದು ಹೇಳಲಾಗುತ್ತಿದೆ.

RELATED ARTICLES

Related Articles

TRENDING ARTICLES