ಬೆಂಗಳೂರು : ಈ ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸಂಸದ ಪ್ರತಾಪ್ ಸಿಂಹಗೆ ಕೈ ತಪ್ಪುತ್ತೆ ಎನ್ನುವ ಮಾತುಗಳು ಹೆಚ್ಚಾಗುತ್ತಿದೆ. ಹೀಗಾಗಿ, ಪ್ರತಾಪ್ ಸಿಂಹ ಅಭಿಮಾನಿಗಳು ಪ್ರತಿಭಟನೆ ಮಾಡಿದ್ದಾರೆ.
ಮೈಸೂರು ಹಿನಕಲ್ ಫ್ಲೈ ಓವರ್ ಕೆಳಗೆ ಧರಣಿ ನಡೆಸಿದ್ದು, ಹಾಲಿ ಸಂಸದ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಅಭಿಮಾನಿಗಳು ಆಕ್ರೋಶ ಹೊರ ಹಾಕ್ತಿದ್ದಾರೆ. ಈ ಬೆನ್ನಲ್ಲೇ ಪ್ರತಾಪ್ ಸಿಂಹ ಅಚ್ಚರಿ ಟ್ವೀಟ್ ಮಾಡಿದ್ದಾರೆ.
ಆತ್ಮೀಯ ಕಾರ್ಯಕರ್ತರು ಮತ್ತು ಹಿತೈಷಿಗಳೇ, ಪ್ರೀತಿಯ ಪ್ರಧಾನಿ ನರೇಂದ್ರ ಮೋದಿಜಿ ಇಲ್ಲದೆ ನಾನೇನು? ಈ 2 ಫೋಟೋಗಳನ್ನು ನೋಡಿ ಮತ್ತು ಅರ್ಥಮಾಡಿಕೊಳ್ಳಿ. ನನ್ನ ರಾಜಕೀಯ ಅಸ್ತಿತ್ವಕ್ಕೆ ನಾನು ಮೋದಿಜಿಗೆ ಋಣಿಯಾಗಿದ್ದೇನೆ. ಪ್ರತಿಭಟನೆ ಮಾಡಬೇಡಿ ಎಂದು ನಿಮ್ಮೆಲ್ಲರಿಗೂ ವಿನಮ್ರವಾಗಿ ವಿನಂತಿಸುತ್ತೇನೆ. ನಾವೆಲ್ಲರೂ ಒಂದೇ ಕುಟುಂಬದವರು, ಮೋದಿಜಿಗಾಗಿ ಕೆಲಸ ಮಾಡೋಣ ಎಂದು ಮನವಿ ಮಾಡಿದ್ದಾರೆ.
ಯದುವೀರ್ ಒಡೆಯರ್ಗೆ ಟಿಕೆಟ್ ಫೈನಲ್
ಅಲ್ಲದೆ, ಬಿಜೆಪಿ ಚುನಾವಣೆ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಇತ್ತ, ಈ ಬಾರಿ ಮೈಸೂರು ಕ್ಷೇತ್ರದ ಟಿಕೆಟ್ ಪ್ರತಾಪ್ ಸಿಂಹ ಬದಲು ಯದುವೀರ್ ಒಡೆಯರ್ಗೆ ಫೈನಲ್ ಆಗಿದೆ ಎಂದು ಹೇಳಲಾಗುತ್ತಿದೆ.
Dear karyakarthas & well wishers,
wht am I without beloved PM @narendramodi ji? See these 2 photos and understand. I owe my political existence to Modi ji. I humbly request all of you to not protest. We all belong to one family, let’s work for Modi ji. @AgrawalRMD pic.twitter.com/nTmHfHePRb— Pratap Simha (Modi Ka Parivar) (@mepratap) March 13, 2024