Monday, May 20, 2024

ಇಲ್ಲಿ ಕೂಗಿದ್ರೆ ಕನಕಪುರಕ್ಕೆ ಕೇಳಬೇಕು : ಡಿಕೆ ಬ್ರದರ್ಸ್ ವಿರುದ್ಧ ಹೆಚ್​ಡಿಕೆ ಕಿಡಿ

ಹಾಸನ : ಕನಕಪುರದಿಂದ ಬಂದು ಇಲ್ಲಿ ಜೆಡಿಎಸ್ ಸೋಲಿಸುತ್ತೀನಿ ಅಂತಾರೆ. ಇಲ್ಲಿ ಕೂಗಿದ್ರೆ ಕನಕಪುರಕ್ಕೆ ಕೇಳಬೇಕು ಎಂದು ಡಿಕೆ ಬ್ರದರ್ಸ್ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಹಾಸನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಇಲ್ಲಿಗೆ ಬಂದು ಹಾಸನದಲ್ಲಿ ಕೂಗಿದ್ರೆ ಹೊಳೆನರಸೀಪುರಕ್ಕೆ ಕೇಳಬೇಕು ಅಂತ ಹೇಳ್ತಾರೆ. ರಾಜಕೀಯದಲ್ಲಿ ಸೋಲು, ಗೆಲುವು ಸಹಜ. ನಾವು ಗೆದ್ದಾಗ ದುರಂಹಕಾರ ಮಾಡಿಲ್ಲ, ಸೋತಾಗ ಕುಗ್ಗಿಲ್ಲ ಎಂದು ತಿರುಗೇಟು ಕೊಟ್ಟರು.

ಬಿಜೆಪಿಯ ಕಾರ್ಯಕರ್ತರಿಗೆ ಮನವಿ ಮಾಡ್ತಿನಿ. ಒಂದು‌ ಕಡೆ ನರೇಂದ್ರ ಮೋದಿ, ಒಂದು ರಾಮಮಂದಿರ‌ ನಿರ್ಮಾಣ. ಬಿಜಾಪುರ, ಕಲ್ಬುರ್ಗಿ, ಚಿತ್ರದುರ್ಗ, ರಾಯಚೂರಿನಲ್ಲಿ ಎರಡುವರೆ ಲಕ್ಷ ಮತಗಳಿದ್ದಾವೆ. ನಾವು ಹಲವು ಕಡೆಗಳಲ್ಲಿ ಬಿಜೆಪಿಗೆ ಶಕ್ತಿ ಕೊಡುತ್ತಿದ್ದೇವೆ ಎಂದು ಹೇಳಿದರು.

ಈ‌ ಜಿಲ್ಲೆಗೆ ನಾನು ಕಿಂಚಿತ್ತು ಸೇವೆ ಮಾಡಿದ್ದೇನೆ

ಪ್ರಜ್ವಲ್‌ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಲ್ಲ. ಈ‌ ಜಿಲ್ಲೆಗೆ ನಾನು ಕಿಂಚಿತ್ತು ಸೇವೆ ಮಾಡಿದ್ದೇನೆ. ಇವತ್ತು ಪ್ರಜ್ವಲ್ ಅಲ್ಲ ಅಭ್ಯರ್ಥಿ, ಈ ಕುಮಾರಸ್ವಾಮಿನೇ ಅಭ್ಯರ್ಥಿ. ನನ್ನಲ್ಲಿ ಪ್ರಜ್ವಲ್‌ರೇವಣ್ಣ ಅವರನ್ನು ಕಾಣಿ. ಹಾಗೆಯೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಡಾ. ಮಂಜುನಾಥ್ ಸ್ಪರ್ಧಿಸುತ್ತಾರೆ. ಡಾ. ಮಂಜುನಾಥ್ ಈ ಜಿಲ್ಲೆಯ ಮಣ್ಣಿನ ಮಗ ಎಂದು ಕುಮಾರಸ್ವಾಮಿ ತಿಳಿಸಿದರು.

RELATED ARTICLES

Related Articles

TRENDING ARTICLES