ತುಮಕೂರು : 100ಕ್ಕೆ 200 ರಷ್ಟು ಕಾಂಗ್ರೆಸ್ ಪಕ್ಷ ಈ ಬಾರಿ ದೇಶದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ನೊಣವಿನಕೆರೆ ಯಶವಂತ ಗುರೂಜಿ ಭವಿಷ್ಯ ನುಡಿದರು.
ತುಮಕೂರಿನ ನೊಣವಿನಕೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿವರಾತ್ರಿ ತಾಳೆಗರಿ ನೋಡಿ ಭವಿಷ್ಯ ನುಡಿದರು. ಮೋದಿ ಆಡಳಿತ ಅಂತ್ಯವಾಗುತ್ತದೆ ಎಂದರು.
ಹಿಂದೆ ಮಹಿಳೆ ರಾಷ್ಟ್ರದ ಆಡಳಿತ ಮಾಡುವುದಾಗಿ ತಿಳಿಸಿದ್ದೆ. ದಶಭಕ್ತಿಯ ಪ್ರಕಾರ ವಿಶೇಷವಾಗಿ ಒಂದು ಸ್ತ್ರೀ ಆಡಳಿತ ಮಾಡ್ತಾಳೆ. ಈಗಿನ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಯೋಗ ಪ್ರಾರಂಭವಾಗುತ್ತದೆ. ಇಂದಿರಾ ಗಾಂಧಿ ಪಕ್ಷ ಸ್ಥಾಪಿತ ಲಗ್ನದ ಮೇಲೆ ಅನ್ಯಧರ್ಮಗಳ ಸಹಾಯದಿಂದ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ಪ್ರಿಯಾಂಕಾ ಗಾಂಧಿ ಪ್ರಧಾನಿ ಆಗ್ತಾರೆ
ಸ್ತ್ರೀ ದಿಟ್ಟತನದಲ್ಲಿ ನಿಂತು ಮಹಾನಾಯಕನಿಗೆ ಭಯ ಹುಟ್ಟಿಸುತ್ತಾಳೆ. ಅವಳೇ ಗೆಲುವು ಸಾಧಿಸಿ ಅಧಿಕಾರ ಸ್ವೀಕಾರ ಮಾಡಿ ನಂತರ ಅಧಿಕಾರ ಬಿಟ್ಟುಕೊಡುತ್ತಾಳೆ. ಶಿವರಾತ್ರಿ ಒಳಗೆ ಚುನಾವಣೆ ನಡೆದಿದ್ರೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗ್ತಾ ಇದ್ರು. ಆದ್ರೆ, ಈಗಿನ ಜನ್ಮ ಲಗ್ನದ ಪ್ರಕಾರ ಪ್ರಿಯಾಂಕಾ ಗಾಂಧಿ ಅವರಿಗೆ ದೇಶದ ಗದ್ದುಗೆ ಪ್ರಾಪ್ತಿಯಾಗುತ್ತೆ. ಪ್ರಿಯಾಂಕಾ ಗಾಂಧಿ ಅಧಿಕಾರ ವಹಿಸಿಕೊಂಡು ಬಳಿಕ ರಾಹುಲ್ ಗಾಂಧಿಗೆ ಅಧಿಕಾರ ಬಿಟ್ಟು ಕೊಡ್ತಾರೆ ಎಂದು ತಿಳಿಸಿದರು.
ಕಾಂಗ್ರೆಸ್ 22 ರಿಂದ 23 ಸೀಟು ಗೆಲ್ಲುತ್ತದೆ
ಕರ್ನಾಟಕದಲ್ಲಿ 22 ರಿಂದ 23 ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ 5 ರಿಂದ 6 ಸ್ಥಾನ ಸಿಗುತ್ತೆ. ಹಿಂದೆ ಕಾಂಗ್ರೆಸ್ ಪಕ್ಷ 135 ಬರುತ್ತೆ ಅಂತ ಹೇಳಿದ್ವಿ. ತೆಲಂಗಾಣದಲ್ಲೂ ಕೂಡಾ 65 ಸೀಟು ಬರುತ್ತೆ ಅಂತ ಹೇಳಿದ್ವಿ, ಎಲ್ಲವೂ ಆಗಿದೆ ಎಂದು ನೊಣವಿನಕೆರೆಯಲ್ಲಿ ಯಶವಂತ ಗುರೂಜಿ ಹೇಳಿದರು.