Monday, May 20, 2024

ತಾಯಿಯನ್ನು ಬಿಟ್ಟು ಕೊಡಲ್ಲ: ಸುಮಲತಾ ಪರ ಪ್ರಚಾರದ ಸುಳಿವು ನೀಡಿದ ನಟ ದರ್ಶನ್

ಉಳ್ಳಾಲ: ಹೆತ್ತ ತಾಯಿಯನ್ನ ಬಿಟ್ಟು ಕೊಡಕ್ಕೆ ಆಗುತ್ತಾ ಈ ಹಿಂದೆಯೂ ಅವರ ಜೊತೆಗೆ ನಿಂತಿದ್ದೆ. ಯಾವಾಗಲೂ ನಮ್ಮ ಅಮ್ಮನ ಜೊತೆ ಇರುತ್ತೇನೆ.ಎಂದು ನಟ ದರ್ಶನ್ ಸಂಸದೆ ಸುಮಲತಾ ಅಂಬರೀಶ್ ಪರ ಪ್ರಚಾರಕ್ಕೆ ಮತ್ತೆ ಸಿದ್ಧ ಎಂದು ಸುಳಿವು ನೀಡಿದ್ದಾರೆ.

ಮಂಡ್ಯ ಸಂಸದೆ ಸುಮಲತಾ ಚುನಾವಣೆಗೆ ಸ್ಪರ್ಧಿಸಿದರೆ, ಅವರ ಪರ ಪ್ರಚಾರ ಕೈಗೊಳ್ಳುವ ಕುರಿತ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಹೆತ್ತ ತಾಯಿಯನ್ನು ಎಂದಾದರೂ ಬಿಟ್ಟು ಕೊಡಲಿಕ್ಕಾಗುತ್ತದೆಯೇ’  ಮೊನ್ನೆಯವರೆಗೂ ಸುಮಲತಾ ಅಮ್ಮನ ಜೊತೆ ಇದ್ದೆ, ಈಗ ಅವರ ಕೈ ಬಿಟ್ಟರೆ ಆಗುತ್ತದೆಯೇ ಸರ್. ನಿಮ್ಮ ಮನೆಯಲ್ಲಿ ನಿಮ್ಮ ತಾಯಿಯನ್ನು ಬಿಟ್ಟು ಬಿಡುತ್ತೀರಾ. ಸುಮಲತಾ ಅಮ್ಮ ಅಮ್ಮನೇ ಸಾರ್ ಎಂದಿದ್ದಾರೆ.

ನಾನು ಮಂಗಳೂರಿಗೆ ಸುಮಾರು ಸಲ ಬಂದಿದ್ದೇನೆ. ಆದರೆ ಕುತ್ತಾರಿಗೆ ಬರುವುದಕ್ಕೆ ಆಗಿರಲಿಲ್ಲ. ಈ ಕ್ಷೇತ್ರದ ಬಗ್ಗೆ ಅನೇಕರು ಹೇಳುತ್ತಿದ್ದರು. ಹಾಗಾಗಿ ಭೇಟಿ ನೀಡಿ ಪ್ರಾರ್ಥಿಸಿದ್ದೇನೆ. ಇದಕ್ಕೆ ಯಾವುದೇ ನಿರ್ದಿಷ್ಟ ಕಾರಣ ಇಲ್ಲ’ ಎಂದರು.

ಹಾಸ್ಯ ನಟ ಚಿಕ್ಕಣ್ಣ, ಪ್ರಶಾಂತ್ ಮಾರ್ಲ, ಮಹಾಬಲ ಶೆಟ್ಟಿ, ವಿದ್ಯಾಚರಣ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಪ್ರೀತಮ್ ಶೆಟ್ಟಿ ಹಾಗೂ ದೆಕ್ಕಾಡು ಕೊರಗಜ್ಜ ಅದಿಸ್ಥಳದ ಟ್ರಸ್ಟಿಗಳು ಇದ್ದರು.

RELATED ARTICLES

Related Articles

TRENDING ARTICLES