Sunday, May 19, 2024

ಬಿಜೆಪಿ ಅವ್ರಿಗೆ ಬುದ್ಧಿ ಭ್ರಮಣೆ ಆಗಿದೆ: ಡಿ.ಕೆ ಶಿವಕುಮಾರ್ 

ಮಂಡ್ಯ: ಬಿಜೆಪಿ ಅವ್ರಿಗೆ ಬುದ್ಧಿ ಭ್ರಮಣೆ ಆಗಿದೆ ಅವರಿಗೆ ನಿಜವಾಗಿಯೂ ಮಾನ ಮರ್ಯಾದೆ ಇಲ್ಲ ಎಂದು ಆರ್​.ಅಶೋಕ್​ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. 

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಆರೋಪದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಅವರಿಗೆ ಬುದ್ಧಿ ಭ್ರಮಣೆ ಆಗಿದೆ.ನಮಗೆ ಕುಡಿಯಲು ನೀರಿಲ್ಲ, ತಮಿಳುನಾಡಿಗೆ ಯಾಕೆ ಬಿಡೋಣ.ಶಿವ ಡ್ಯಾಂ‌‌ನಲ್ಲಿ ನೀರೆತ್ತಲು ನೀರು ಹರಿಸಲಾಗಿದೆ ಎಂದು ಕುಟುಕಿದ್ದರು.

ನಮ್ಮ ರೈತರಿಗೆ ನಮ್ಮ‌ ಕೈಲಿ ನೀರು ಕೊಡಲು ಆಗಲ್ಲ.ಇನ್ನು ತಮಿಳುನಾಡಿಗೆ ನೀರು ಕೊಡೋದು ಎಲ್ಲಿಂದ?
ತೆಲಂಗಾಣ ನೀರಿಗಾಗಿ ಮನವಿ ಮಾಡ್ತಿದ್ದಾರೆ. ನಾವು ನಿಮಗೆ ಕೊಡ್ತೀವಿ, ನೀವು ನಮಗೆ ಕೊಡಿ ಅಂತಿದ್ದಾರೆ.
ಅದರ ಬಗ್ಗೆ ಯೋಚನೆ ಮಾಡ್ತಿದ್ದೀವಿ.ದೇವೇಗೌಡ್ರು ಮತ್ತು ಬಿಜೆಪಿ ಅವರು ಮೊದಲು ಮೇಕೆದಾಟುಗೆ ಅನುಮತಿ ಕೊಡಿಸಲಿ. ತಾನು ಮಾಡಿದ ತಪ್ಪು ಮುಚ್ಚಿಕೊಳ್ಳಲು ಬಿಜೆಪಿ ಈ ರೀತಿ ಮಾಡ್ತಿದ್ದಾರೆ.ನಮ್ಮನ್ನು ದಡ್ಡರು ಎಂದು ಕೊಂಡಿದ್ದಾರಾ? ಮೊದಲು ಕುಡಿಯುವ ನೀರಿಗೆ ಆದ್ಯತೆ.ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಲ್ಲ ಎಂದರು.

ಸಂವಿಧಾನದ ವಿರೋಧಿ ಬಿಜೆಪಿ.ಪಿಎಂ‌ ಕೈಲಿ ಒಂದು ಸ್ಟಾಂಪ್ ಹಾಕಿಸಿ ಸಾಕು.ಆಮೇಲೆ ನೋಡೋಣ ಎಂದು ಸಂವಿಧಾನ ತಿದ್ದುಪಡಿ ಕುರಿತು ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ವಾಗ್ದಾಳಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES