Sunday, May 19, 2024

ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕಷ್ಟೇ ಡಿಕೆಶಿ ಕಾಳಜಿ: ಬಿ.ವೈ ವಿಜಯೇಂದ್ರ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕಷ್ಟೇ ಡಿಸಿಎಂ ಡಿ.ಕೆ ಶಿವಕುಮಾರ್ ನೀರಿನ ಕಾಳಜಿ ಮಾಡಿ ರಾಜಕಾರಣ ಮಾಡ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಇಡೀ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಡಿಸಿಎಂ ಡಿಕೆ ಶಿವಕುಮಾರ್ ಬರೀ ಬೆಂಗಳೂರು ಗ್ರಾಮಾಂತರಕ್ಕೆ ಮಾತ್ರ ಅಧಿಕಾರಿಗಳನ್ನ ನೇಮಿಸಿರೋದು ಇವರ ದುರಾಡಾಳಿತಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದೆ.ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ ಅಲ್ಲಿ ಮಾತ್ರ ಜನರು ನೀರು ಕುಡಿಯೋದು..? ಬೇರೆ ಕಡೆ ಇರೋರು ಮನುಷ್ಯರಲ್ಲವೇ..? ಎಂದು ಪವರ್​ ಟಿವಿಯಜಲಕ್ಷಾಮದ ವರದಿಯ ಸಂಚಲನ ಉಲ್ಲೇಖ ಮಾಡಿ ಅವರು ವಾಗ್ದಾಳಿ ನಡೆಸಿದ್ದರು.

ನೀರಿನಲ್ಲೂ ರಾಜಕಾರಣ ಮಾಡುವ ಇಂತಹ ದರಿದ್ರ ಸರ್ಕಾರ ಇದ್ದರೆಷ್ಟು ಸತ್ತರೆಷ್ಟು ಎಂದು ಜನರು ಮಾತಾಡ್ತಿದ್ದಾರೆ.ಸೋಮವಾರ ಬೆಂಗಳೂರು ಜಲ ಮಂಡಲಿ ಸಭೆ ಮುಂದೆ ಪ್ರತಿಭಟನೆ ಮಾಡಲು ಕರೆ ಕೊಡಲಾಗಿದೆ ಎಂದರು.

ರಾಜ್ಯದಲ್ಲೂ ಭೀಕರ ಬರಗಾಲ ಇದ್ದರೂ ಯಾವುದೇ ಪೂರ್ವತರ ಸಿದ್ದತೆಗಳ ಇಲ್ಲ.ನರೇಂದ್ರ ಮೋದಿ ಟೀಕಿಸೋದು ಬಿಟ್ಟು ಬೇರೆ ಏನು ಮಾಡ್ತಿಲ್ಲ.ತಮಿಳುನಾಡಿಗೆ ಕೋರ್ಟ್ ಆದೇಶ ಬರೋಕು ಮುನ್ನವೇ ಕಣ್ಣು ಮುಚ್ಚಿ ಕೊಂಡು ನೀರು ಬಿಡ್ತಿದ್ರು ಇದರ ಬಗ್ಗೆ ಕಾಂಗ್ರೆಸ್ ನವ್ರು, ಡಿಕೆ ಶಿವಕುಮಾರ್ ಅವ್ರು ಉತ್ತರ ಕೊಡಬೇಕು ತಮ್ಮ ಜವಬ್ದಾರಿ ಯಿಂದ ನುಣುಚಿಕೊಂಡ ಪರಿಣಾಮ ವಾಗಿ ರಾಜ್ಯದ ಜನರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಕಿಡಿಕಾರಿದ್ದರು.

RELATED ARTICLES

Related Articles

TRENDING ARTICLES