Monday, May 20, 2024

ಪ್ರಾಣಿ-ಪಕ್ಷಿಗಳಿಗೆ ಮನೆ ಮೇಲೆ, ಮನೆ ಮುಂದೆ ನೀರು ಇಡಿ : ಇದು ‘ಡಿ ಬಾಸ್’ ಪ್ರಾಣಿ ಪ್ರೀತಿಗೆ ಸಾಕ್ಷಿ

ಬೆಂಗಳೂರು : ಬೇಸಿಗೆ ಬಂತು.. ದಯವಿಟ್ಟು ಪ್ರಾಣಿ-ಪಕ್ಷಿಗಳಿಗೆ ಮನೆ ಮೇಲೆ, ಮನೆ ಮುಂದೆ ನೀರು ಇಡಿ ಎಂದು ತಮ್ಮ ಅಭಿಮಾನಿಗಳು ಹಾಗೂ ನಾಡಿನ ಜನತೆಗೆ ನಟ ದರ್ಶನ್ ಮನವಿ ಮಾಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರಿಗೆ ಪ್ರಾಣಿ-ಪಕ್ಷಿಗಳು ಅಂದ್ರೆ ಪಂಚಪ್ರಾಣ. ಹಲವಾರು ಪ್ರಾಣಿಗಳನ್ನು ದತ್ತು ಪಡೆದಿರುವ ಡಿ ಬಾಸ್ ತಮ್ಮ ಫಾರ್ಮ್​ಹೌಸ್​ನಲ್ಲಿ ಅನೇಕ ಪಶು ಪಕ್ಷಿಗಳಿಗೆ ಆಶ್ರಯ ಕೊಟ್ಟಿದ್ದಾರೆ.

ಬೆಂಗಳೂರಿನ ಜೆಪಿ ಪಾರ್ಕ್​ನಲ್ಲಿ ಇತ್ತೀಚೆಗೆ ನಡೆದ ಶಿವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ದರ್ಶನ್ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ಬೇಸಿಗೆ ಮುಗಿಯೋವರೆಗೂ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರನ್ನು ಇಡಿ ಎಂದು ಮನವಿ ಮಾಡಿದ್ದಾರೆ.

ಪ್ರಾಣಿಪ್ರಿಯರ ಮನಸ್ಸು ಗೆದ್ದ ದಾಸ

ನಮಗಾದರೆ ಕೇಳೋದಕ್ಕೆ ಬಾಯಿ ಇದೆ. ಆದರೆ, ಮೂಕಪ್ರಾಣಿಗಳ ಕೂಗು ಅರ್ಥಮಾಡಿಕೊಂಡು ಬೇಸಿಗೆ ಮುಗಿಯುವ ತನಕ ನಾವೇ ಪ್ರಾಣಿ ಪಕ್ಷಿಗಳಿಗೆ ನೀರು ಇಡಬೇಕು ಎಂದು ಮನವಿ ಮಾಡಿದ್ದಾರೆ. ನಿಮ್ಮ ಮನೆ ಕಚೇರಿಗಳ ಬಳಿ ಪಕ್ಷಿಗಳಿಗೆ ಕುಡಿಯೋದಕ್ಕೆ ಒಂದಿಷ್ಟು ನೀರನ್ನ ಇಡಿ ಅಂತ ಜನರಿಗೆ ಕರೆಕೊಟ್ಟಿದ್ದಾರೆ. ದರ್ಶನ್​ ಅವರ ಈ ನಡೆ ಪ್ರಾಣಿಪ್ರಿಯರ ಮನಸ್ಸು ಗೆದ್ದಿದೆ.

ಬೆಂಗಳೂರಿನ ಜೆ.ಪಿ ಪಾರ್ಕ್​ನಲ್ಲಿ ನಡೆದ ಮಹಾ ಶಿವರಾತ್ರಿ ಅಹೋರಾತ್ರಿ ಜಾಗರಣೆ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗವಹಿಸಿದ್ದರು. ಶಾಸಕರಾದ ಮುನಿರತ್ನ, ಅಶ್ವಥ್ ನಾರಾಯಣ್ ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES