Saturday, May 18, 2024

ಮುಖ್ಯಮಂತ್ರಿ ಸ್ಥಾನ ಈಗ ಖಾಲಿ ಇಲ್ಲ: ಸಚಿವ ಎನ್.ಚಲುವರಾಯಸ್ವಾಮಿ

ಮಂಡ್ಯ: ಮುಖ್ಯಮಂತ್ರಿ ಸ್ಥಾನ ಈಗ ಖಾಲಿ ಇಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.

ದಲಿತ ಸಿಎಂ ಕೂಗು ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಮಾತನಾಡಿಅವರು, ಮುಖ್ಯಮಂತ್ರಿ ಸ್ಥಾನ ಈಗ ಖಾಲಿ ಇಲ್ಲ.ಹೊಸ ಸರ್ಕಾರ ಬಂದಾಗ ಸಿಎಂ ಚರ್ಚೆ ಆಗಬೇಕು ಈಗ ಅಲ್ಲ.ಆ ಸಂದರ್ಭ ಬಂದಾಗ ಚರ್ಚೆ ಆಗಲಿ ಎಂದರು.

ಇದನ್ನೂ ಓದಿ: ಲೋಕಸಭೆಯಲ್ಲಿ ಕಾಂಗ್ರೆಸ್​ 20 ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ: ಸಚಿವ ದಿನೇಶ ಗುಂಡೂರಾವ್

AICC ಅಧ್ಯಕ್ಷರೇ ದಲಿತ ಸಮುದಾಯದವರು. ಅವರೆ ಯಾವ ಸಮುದಾಯದವರು ಸಿಎಂ ಆಗಬೇಕು ಅಂತ ತೀರ್ಮಾನಿಸುತ್ತಾರೆ. ಮಹದೇವಪ್ಪ ಹಿರಿಯರು ಅವರ ಮಾತಿಗೆ ನಾನು ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದರು.

RELATED ARTICLES

Related Articles

TRENDING ARTICLES