ಚಿಕ್ಕಮಗಳೂರು : ರಾಮ ದೇವರಲ್ಲ, ಭಾರತ ದೇಶವಲ್ಲ ಎಂದಿರುವ ಡಿಎಂಕೆ ಸಂಸದ ಎ. ರಾಜಾ ವಿರುದ್ಧ ಮಾಜಿ ಸಚಿವ ಸಿ.ಟಿ.ರವಿ ಕಿಡಿಕಾರಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾಯಿ ಕೂಗಿದರೆ ಭೂಲೋಕ ಕೆಟ್ಟಿ ಹೋಗುತ್ತಾ? ರಾಮನನ್ನ ಟೀಕೆ ಮಾಡೋದು ಆಕಾಶಕ್ಕೆ ಉಗಿದಂತೆ, ಅವರ ಮುಖಕ್ಕೆ ಬೀಳೋದು ಎಂದು ವಾಗ್ದಾಳಿ ನಡೆಸಿದ್ದಾರೆ.
ಇವರು ಭಾರತದ ಜನರ ಶ್ರದ್ಧೆಯನ್ನು ನಾಶ ಮಾಡಬೇಕು ಎಂದು ಬಯಸೋರು. ಹೀಗೇ ಬಯಸೋರೆಲ್ಲಾ ನಾಶವಾಗಿ ಹೋಗಿದ್ದಾರೆ. ಎಲ್ಲಿ ನಿನ್ನ ಹರಿ ಎಂದ ಹಿರಣ್ಯ ಕಶ್ಯಪನ ಮನೆಯಲ್ಲೇ ಪ್ರಹ್ಲಾದ ಹುಟ್ಟಿದ್ದ. ಈ ಎ. ರಾಜಾನ ಮನೆಯಲ್ಲೇ ರಾಮಭಕ್ತ ಹುಟ್ಟುತ್ತಾನೆ ಎಂದು ಹೇಳಿದ್ದಾರೆ.
ರಾಮನ ಹುಂಡಿ ಬೇಕು, ರಾಮ ಬೇಡಾ?
ತಮಿಳುನಾಡಲ್ಲಿ ಸಾವಿರಾರು ರಾಮನ ದೇವಾಲಯಗಳಿವೆ, ತಾಕತ್ತಿದ್ದರೆ ಮುಟ್ಟಲಿ. ರಾಮೇಶ್ವರ, ರಾಮನೇ ಪೂಜೆ ಮಾಡಿದ ಈಶ್ವರನಿದ್ದಾನೆ. ಇವರಿಗೆ ರಾಮನ ದೇವಾಲಯದ ಹುಂಡಿ ಬೇಕು, ರಾಮ ಬೇಡಾ? ರಾಮನ ದೇವಸ್ಥಾನದ ಮುಂದೆ ಹುಂಡಿ ಇಟ್ಕೊಂಡು ಹಣ ತಿಂತಾರೆ ನಾಚಿಕೆ ಆಗಲ್ವಾ ಇವರಿಗೆ. ಇಂತವರು ಆಕಾಶಕ್ಕೆ ಉಗಿದು, ಮೈಮೇಲೆ ಬೀಳಿಸಿಕೊಂಡವರಿದ್ದಾರೆ.