ಬೆಂಗಳೂರು : ಕರಿಮಣಿ ಮಾಲೀಕ ನೀನಲ್ಲ.. ಬೆನ್ನಲ್ಲೇ ಇದೀಗ ಓ ನಲ್ಲ ನೀರಿಲ್ಲ.. ಕುಡಿಯೋಕೆ, ತೊಳಿಯೋಕೆ ನೀರಿಲ್ಲ.. ರೀಲ್ಸ್ ವೈರಲ್ ಆಗುತ್ತಿದೆ.
ಪ್ರಸ್ತುತ ಬೆಂಗಳೂರಿನ ಜನರು ಎದುರಿಸುತ್ತಿರುವ ನೀರಿನ ಸಮಸ್ಯೆಗೆ ಈ ಹಾಡು ಹಿಡಿದ ಕೈಗನ್ನಡಿಯಾಗಿದೆ. ಬೇಸಿಗೆ ಆರಂಭವಾಗಿದ್ದು, ಬೆಂಗಳೂರಿನ ಜನರಿಗೂ ನೀರಿನ ಹಾಹಾಕಾರ ತಟ್ಟಿದೆ. ಇದೇ ಈ ರೀಲ್ಸ್ನ ಜೀವಾಳ ಎನ್ನಬಹುದು.
ವಿಕಾಸ್ ವಿಕ್ಕಿಪೀಡಿಯ ಹಾಗೂ ತಂಡದವರು ಬೆಂಗಳೂರಿನ ವಾಸ್ತವ ಸ್ಥಿತಿಯನ್ನು ಹಾಡಿನ ಮೂಲಕ ಬಿಚ್ಚಿಟ್ಟಿದ್ದಾರೆ. ಈ ರೀಲ್ಸ್ ವೀಕ್ಷಿಸಿದ ನೆಟ್ಟಿಗರು ಹಾಗೂ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ತರಹೇವಾರಿ ಕಾಮೆಂಟ್ ಹರಿಬಿಟ್ಟಿದ್ದಾರೆ.
ನೀರಿಲ್ಲ.. ನೀರಿಲ್ಲ.. ನಮ್ಮ ಬೆಂಗಳೂರಿನಲ್ಲಿ ನೀರಿಲ್ಲ.. ನೀರೇ ಇಲ್ಲ, ಬೆಂಗಳೂರಿನ ಪರಿಸ್ಥಿತಿ ಅಲ್ಲಾ.. ಇಡೀ ರಾಜ್ಯದ ಪರಿಸ್ಥಿತಿ ಹೀಗೆ ಆಗಿದೆ ಎಂದು ಹಾಡಿನಲ್ಲಿ ಬೇಸರ ಹೊರ ಹಾಕಲಾಗಿದೆ. ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡು ಸಾಕಷ್ಟು ವೈರಲ್ ಆಗಿತ್ತು. ಅದೇ ರೀತಿ ಈ ನೀರಿಲ್ಲ ಹಾಡು ಎಷ್ಟರಮಟ್ಟಿಗೆ ಸದ್ದು ಮಾಡುತ್ತದೆ ಎಂದು ಕಾದು ನೋಡಬೇಕಿದೆ.
View this post on Instagram