Monday, May 20, 2024

Missile Attack: ಇಸ್ರೇಲ್​ನಲ್ಲಿ ಕ್ಷಿಪಣಿ ದಾಳಿ: ಕೇರಳ ಮೂಲದ ವ್ಯಕ್ತಿ ಸಾವು

ಜೀರುಸಲೇಂ: ಇಸ್ರೇಲ್​ ಹಾಗೂ ಹಮಾಸ್ ನಡುವಿನ ಸಂಘರ್ಷ ಶಾಂತವಾಗುವಂತೆ ಕಾಣುತ್ತಿಲ್ಲ.ಲೆಬನಾನ್ ಇಸ್ರೇಲ್​ ಮೇಲೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಭಾರತ ಮೂಲದ ಇನ್ನಿಬ್ಬರು ಗಾಯಗೊಂಡಿದ್ದಾರೆ.

ಮೃತ ವ್ಯಕ್ತಿಯನ್ನು ಕೇರಳದ ಕೊಲ್ಲಂ ಜಿಲ್ಲೆಯ ಪ್ರತಿಭನ್ ಮ್ಯಾಕ್ಸಿಲ್ ಎಂದು ಗುರುತಿಸಲಾಗಿದ್ದು, ಬುಶ್ ಜೋಸೆಫ್ ಜಾರ್ಜ್, ಪೌಲ್ ಮೆಲ್ವಿನ್ ಎಂಬುವವರು ಗಾಯಗೊಂಡವರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಅವರ ಮುಖ ಮತ್ತು ದೇಹದ ಮೇಲೆ ಹಲವು ಗಾಯಗಳಾಗಿವೆ. ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ.

ಈ ಕುರಿತ ಮಾಹಿತಿಯನ್ನು ಇಸ್ರೇಲ್ ತುರ್ತು ನಿಗಾ ಪಡೆ ಎಂಡಿಎ ಖಚಿತಪಡಿಸಿದೆ. ಉತ್ತರ ಇಸ್ರೇಲ್‌ನ ಗಲಿಲೀ ಎಂಬ ಪ್ರದೇಶದ ತೋಟದ ಮೇಲೆ ಲೆಬನಾನ್ ಕಡೆಯಿಂದ ಕ್ಷಿಪಣಿ ದಾಳಿಯಾಗಿದೆ ಎಂದು ತಿಳಿಸಿದೆ.

RELATED ARTICLES

Related Articles

TRENDING ARTICLES