Sunday, May 12, 2024

UI ಹಾಡಲ್ಲಿ ತಗಡು.. ಗುಮ್ಮಿಸ್ಕೋತಿಯಾ ಪದ ಬಳಕೆ

ಬೆಂಗಳೂರು : ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನ ಹಾಗೂ ನಟನೆಯ ‘ಯುಐ’ಚಿತ್ರದ ಅಪ್ಡೇಟ್​ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಉಪ್ಪಿ ಹಾಡಿನ ರುಚಿ ಉಣಬಡಿಸಿದ್ದಾರೆ.

ಉಪೇಂದ್ರ ಹಾಗೂ ಚಿತ್ರತಂಡ ಫ್ಯಾನ್ಸ್​ಗಳಿಗೆ ಟ್ರೋಲ್ ರೀಲ್ಸ್​ಗಳನ್ನೇ ಕಂಪೋಸ್​ ಮಾಡಿ ಹಾಡೊಂದನ್ನು ಸಿದ್ದಪಡಿಸಿದ್ದಾರೆ. ಈ ಹಾಡಿನಲ್ಲಿ ಬೆಳ್ಳುಳ್ಳಿ ಕಬಾಬ್, ಕರಿಮಣಿ ಮಾಲೀಕ ಸೇರಿದಂತೆ ಹಲವು ಟ್ರೆಂಡ್ ರೀಲ್ಸ್​ಗಳನ್ನು ಬಳಕೆ ಮಾಡಿಕೊಂಡಿದ್ದಾರೆ.

UI ಹಾಡಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿವಾದಾತ್ಮಕ ಹೇಳಿಕೆ ‘ತಗಡು.. ಗುಮ್ಮಿಸ್ಕೋತಿಯಾ..’ ಪದವನ್ನೂ ಬಳಕೆ ಮಾಡಲಾಗಿದೆ. ‘ಒಟ್ಟಾಗಿ ನಿಂತ್ರೆ ನಾವು ಜೋಡೆತ್ತಂಗೆ, ಗೆಲವು ಅಕ್ಕಂದೆ. ಗುಮ್ಮಿಸ್ಕೊಂಡು ತಗಡಗೋದ ಅವನು..’ ಎಂಬ ಸಾಲು ಇದೆ. ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್​ ಆದ ಸಾಲುಗಳೆಲ್ಲಾ ಈ ಹಾಡಿನಲ್ಲಿ ಪೋಣಿಸಿಲಾಗಿದೆ. ಅಜನೀಶ್ ಲೋಕ ನಾಥ್ ಟ್ರೆಂಡಿ ಮ್ಯೂಸಿಕ್​ ಜೊತೆ ಈ ಟ್ರೆಂಡಿಂಗ್ ಸಾಲುಗಳನ್ನೆಲ್ಲಾ ಸಾಹಿತ್ಯವಾಗಿಸಿರೋದು ನರೇಶ್ ಕುಮಾರ್. ಸದ್ಯ ಈ ಟ್ರೋಲ್​ ಸಾಂಗ್​ನ ವಿಡಿಯೋ ರಿಲೀಸ್ ಆಗಿದ್ದು, ನಾಯಕಿ ರೀಷ್ಕಾ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.

ರಿಯಲ್ ಸ್ಟಾರ್ ಉಪ್ಪಿ ಜೊತೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಇದೇ ಮೊದಲ ಬಾರಿಗೆ ಕೆಲಸ ಮಾಡಿದ್ದಾರೆ. ಉಪ್ಪಿಯ ಡಿಫ್ರೆಂಟ್ ಡಿಫ್ರೇಂಟ್ ಐಡಿಯಾಗಳಿಂದ ಥ್ರಿಲ್ ಆಗಿ ಒಂದಕ್ಕಿಂತ ಒಂದು ಥ್ರಿಲ್ಲಿಂಗ್ ಸಾಂಗ್ಸ್ ರೆಡಿ ಮಾಡಿದ್ದಾರೆ. ಸದ್ಯ ರಿಲೀಸ್ ಆಗಿರೋ ಟ್ರೋಲ್ ಸಾಂಗ್ ಅದಕ್ಕೆ ಸಾಕ್ಷಿಯನ್ನುವಂತೆ ಇದೆ.

RELATED ARTICLES

Related Articles

TRENDING ARTICLES