ನಾಡಿನ ಜನತೆಯ ಒಳಿತಿಗಾಗಿ ಪರ್ಜನ್ಯ ಜಪ ಹಾಗು ಸಪ್ತಕೋಟಿ ಶಿವಪಂಚಾಕ್ಷರಿ ಜಪಯಜ್ಞವನ್ನು ಶ್ರೀಕಾಲ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಯಜ್ಞದಲ್ಲಿ ನಾಡಿನ ಜನತೆ ಭಾಗವಹಿಸುವಂತೆ ಸಿದ್ದಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗಸ್ವಾಮಿಗಳು ಮನವಿ ಮಾಡಿಕೊಂಡಿದ್ದಾರೆ.
ಶ್ರೀಮಠಕ್ಕೆ ಆಗಮಿಸಿದ ರೈತರು, ಭಕ್ತಾದಿಗಳು ಹಾಗು ಸಾರ್ವಜನಿಕರು ರಾಜ್ಯದ ಒಳಿತಿಗಾಗಿ , ಇಡೀ ರಾಜ್ಯಕ್ಕೆ ಉಂಟಾಗಿರುವ ಬರಗಾಲ ನಿವಾರಣೆಗಾಗಿ ಶುದ್ದ ಮನಸ್ಸಿನಿಂದ ಇಷ್ಟಕಾಮೇಶ್ವರಿ ದೇವಿ ಹಾಗು ಸಿದ್ದಲಿಂಗೇಶ್ವರರಲ್ಲಿ ಬೇಡಿಕೊಂಡಿದ್ದರು, ಹೀಗಾಗಿ ಸಿದ್ದಲಿಂಗೇಶ್ವರ ಗದ್ದುಗೆ ಮಠದಲ್ಲಿ ಸಪ್ತಕೋಟಿ ಶಿವಪಂಚಾಕ್ಷರಿ ಜಪಯಜ್ಞವನ್ನು ಮಾರ್ಚ್ 1 ರಿಂದ ಆರಂಭಿಸಲಾಗಿದ್ದು ಈ ಕಾರ್ಯದಲ್ಲಿ ಎಲ್ಲರೂ ಭಾಗವಹಿಸುವಂತೆ ಕೋರಿದ್ದಾರೆ.