Monday, May 20, 2024

ಭಯೋತ್ಪಾದಕರೆಲ್ಲಾ‘ಕೈ’ ​ಸರ್ಕಾರ ಬಂದ್ಮೇಲೆ ಬಿಲದಿಂದ ಬಂದು ಹೊರಗೆ ಹುಲಿಗಳಾಗಿದ್ದಾರೆ: ಆರ್​. ಅಶೋಕ್​

ಬೆಂಗಳೂರು: ಭಯೋತ್ಪಾದಕರೆಲ್ಲಾ ಕಾಂಗ್ರೆಸ್​ ​ಸರ್ಕಾರ ಬಂದ್ಮೇಲೆ ಬಿಲದಿಂದ ಬಂದು ಹೊರಗೆ ಹುಲಿಗಳಾಗಿದ್ದಾರೆ ಎಂದು ವಿಪಕ್ಷ ನಾಯಕ ಆರ್​.ಅಶೋಕ್​ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಇಲಿಗಳ ಬಿಲದಲ್ಲಿ ಅಡಗಿದ ಭಯೋತ್ಪಾದಕರೆಲ್ಲಾ ಕಾಂಗ್ರೆಸ್​ ಸರ್ಕಾರ ಬಂದ್ಮೇಲೆ  ಬಿಲದಿಂದ ಹೊರಗೆ ಬಂದು  ಹುಲಿಗಳಾಗಿದ್ದಾರೆ. ಬಾಂಬ್ ಇಟ್ಟು ರಸ್ತೆಯಲ್ಲಿ ಆರಾಮಾಗಿ‌ ಓಡಾತ್ತಿದ್ದರು ಸರ್ಕಾರವೇ ಇವರ ಬಗ್ಗೆ ಸಾಫ್ಟ್ ಕಾರ್ನರ್ ತೋರ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಫ್ ಎಸ್ ಎಲ್ ರಿಪೋರ್ಟ್ ಬಂದು ಎಷ್ಟು ದಿನ ಎಷ್ಟು ಗಂಟೆ ಆಯ್ತು ಯಾಕೆ ಅಪರಾಧಿಯನ್ನ ಬಂಧನ ಮಾಡತ್ತಿಲ್ಲ ಅಲ್ಪಸಂಖ್ಯಾತರನ್ನ ಓಲೈಸೋ ಪ್ರವೃತ್ತಿಯನ್ನ ಮುಂದುವರೆಸಿದ್ದಾರೆ. ಮಂಗಳೂರು ಕುಕ್ಕರ್ ಬಾಂಬ್ ದೊಡ್ಡ ಭಯೋತ್ಪಾದಕ ಅಂತಾ ಗೊತ್ತಾಗಿದೆ. ಅವರೆಲ್ಲಾ ಅಮಾಯಕರು, ಮೈ ಬ್ರದರ್ಸ್ ಅಂತಾ ಡಿಕೆ ಶಿವಕುಮಾರ್ ಹೇಳ್ತಾರೆ

ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅಂದ್ರು ಅದೆಲ್ಲಾ ಸುಳ್ಳು, ಆ ರೀತಿ ಘೋಷಣೆ ಕೂಗಿಲ್ಲ ಅಂತಾ ಖರ್ಗೆ ಹೇಳ್ತಾರೆ ಅದನ್ನೆಲ್ಲಾ ಮುಚ್ಚಿಡೋ ಕೆಲಸ ಮಾಡ್ತಾ ಇದ್ದಾರೆ. ರಾಮೇಶ್ವರ್ ಕೆಫೆನಲ್ಲಿ ಬ್ಲಾಸ್ಟ್ ಮಾಡಿದ್ರು ರಾಮ ಅಂದ್ರೆ ಅವರಿಗೆ ಆಗಲ್ಲ ಅದೆಲ್ಲಾ ಬ್ಯುಸಿನಸ್ ವಿಚಾರ ಅಂತ ಡಿಕೆಶಿ ಹೇಳಿದ್ದಾರೆ.ಅದು ಭಯೋತ್ಪಾದ ಕೃತ್ಯ ಅಂತಾ ಪೊಲೀಸರು ಹೇಳಿದ್ದಾರೆ ಕಾಂಗ್ರೆಸ್ ಯಾವ ದಿಕ್ಕಿನಲ್ಲಿ ಹೋಗ್ತಾ ಇದೆ..?

ಅಲ್ಪಸಂಖ್ಯಾತರ ಮನಸ್ಸನ್ನ ಕಲ್ಮಷ ಮಾಡಿಟ್ಟಿದ್ದಾರೆ ನೀವೇನಾದ್ರೂ‌ ಮಾಡಿ, ನಮಗೆ ವೋಟ್ ಹಾಕಿ ಅನ್ನೋ ರೀತಿ ಮಾಡಿದ್ದಾರೆ ಕಾಂಗ್ರೆಸ್ ನ ಮಾನಸಿಕ ಸ್ಥಿತಿ ದೇಶಕ್ಕೆ ದೊಡ್ಡ ಗಂಡಾಂತರ ತರ್ತಿದೆ. ಇವರಿಗೇ ಮಾನಮರ್ಯಾದೆ ಇದ್ಯಾ..? ಇನ್ನೆಷ್ಟು ಬಾಂಬ್ ಬ್ಲಾಸ್ಟ್ ಆಗಬೇಕು ಇನ್ನೆಷ್ಟು ಹತ್ಯೆ ಆಗಬೇಕು ಯಾರ್ ಒತ್ತಡ ಇದೆ, ರಾಹುಲ್ ಗಾಂಧಿ ಒತ್ತಡ ಇದ್ಯಾ ಏನ್ ಒತ್ತಡ ಅಂತಾ ಹೇಳಿ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES