Monday, May 20, 2024

10 ವರ್ಷದ ಹಿಂದಿನ ಕಸದಲ್ಲಿ ಬಿದ್ದಿದ್ದ ಗಣತಿ ಕೊಟ್ಟಿದ್ದಾರೆ : ಶಾಮನೂರು ಶಿವಶಂಕರಪ್ಪ ಗರಂ

ದಾವಣಗೆರೆ : ರಾಜ್ಯ ಸರ್ಕಾರ ಜಾತಿಗಣತಿ ಸ್ವೀಕಾರ ವಿಚಾರಕ್ಕೆ ಕಾಂಗ್ರೆಸ್​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಗರಂ ಆಗಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತು ವರ್ಷದ ಹಿಂದಿನ ಕಸದಲ್ಲಿ ಬಿದ್ದಿದ್ದ ಗಣತಿ ಕೊಟ್ಟಿದ್ದಾರೆ. ಕಸದ ಬುಟ್ಟಿಯಲ್ಲಿ ಇಟ್ಟಿದ್ದ ಜನಗಣತಿ ತಂದಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕಾತರಾಜ್ ಬರೆದಿದ್ದಾರೋ, ಯಾರು ಬರೆದಿದ್ದಾರೋ ಗೊತ್ತಿಲ್ಲ. ಲಿಂಗಾಯತ ಜನ ಎರಡು ಕೋಟಿ ಇದ್ದೇವೆ, ವರದಿಯಲ್ಲಿ ಕಡಿಮೆ ತೋರಿಸಿದ್ದಾರೆ. ಜಾತಿಗಣತಿ ಸ್ವೀಕಾರ ಮಾಡಿದ್ದಾರೆ, ಪಾಸ್ ಮಾಡಿಲ್ಲ. ಗಣತಿ ತಂದು ಕೊಟ್ಟಿದ್ದಾರೆ, ಇವರು ಪಡೆದಿದ್ದಾರೆ. ಇದಕ್ಕೆ ನಮ್ಮದು ವಿರೋಧ ಇದ್ದೇ ಇದೆ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಬ್ರಾಹ್ಮಣರು, ಲಿಂಗಾಯಿತರು ಸೇರಿ ಹೋರಾಟ ಮಾಡ್ತೀವಿ

ಮುಂದಿನ ನಡೆ ಬಗ್ಗೆ ಯೋಚನೆ ಮಾಡ್ತಾ ಇದ್ದೇವೆ‌‌. ವೀರಶೈವ ಲಿಂಗಾಯತ ಮಹಾಸಭಾದಿಂದಲೇ ಜನಗಣತಿ ಮಾಡುತ್ತೇವೆ. ನಮ್ಮಲ್ಲಿ ಹಣ ಇದೆ ಜಾತಿಗಣತಿ ಮಾಡುತ್ತೇವೆ. ಸರ್ಕಾರ ವರದಿ ಬಿಡುಗಡೆ ಮಾಡಿದರೆ ಹೋರಾಟ ಮಾಡುತ್ತೇವೆ. ಒಕ್ಕಲಿಗರು, ಬ್ರಾಹ್ಮಣರು, ಲಿಂಗಾಯಿತರು ಸೇರಿ ಹೋರಾಟ ಮಾಡುತ್ತೇವೆ ಎಂದು ಶಾಮನೂರು ಶಿವಶಂಕರಪ್ಪ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

RELATED ARTICLES

Related Articles

TRENDING ARTICLES