ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಹೌದು, ಶ್ರೀರಂಗಪಟ್ಟಣದಲ್ಲಿ ನಡೆದ ʻಬೆಳ್ಳಿ ಪರ್ವʼದಲ್ಲಿ ದರ್ಶನ್ ಅವರು ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡು,`ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ’ ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿʼʼ ಎಂದು ಹೇಳಿಕೆ ನೀಡಿದ್ರು ಆ ಹೇಳಿಕೆಗೆ ಮಹಿಳಾ ಆಯೋಗ ಹೆಣ್ಣಿನ ಬಗ್ಗೆ ಕೇವಲವಾಗಿ ಮಾತನಾಡಿದ್ದ ನಟ ದರ್ಶನ್ ಬಗ್ಗೆ ಹಲವು ಕೇಸ್ಗಳು ದಾಖಲೆ ಮಾಡಿಕೊಂಡು ಇದೀಗ ಕರ್ನಾಟಕ ರಾಜ್ಯ ಮಹಿಳಾ ಆಯೋಗದಿಂದ ನಟ ದರ್ಶನ್ ಅವರಿಗೆ ನೋಟಿಸ್ ನೀಡಿದೆ.
ನೋಟಿಸ್ ತಲುಪಿದ 10 ದಿನದಲ್ಲಿ ನಟ ಬಂದು ವಿವರಣೆ ನೀಡಲು ಸೂಚನೆ ನೀಡಿದೆ. ಮಹಿಳೆಯರ ಬಗ್ಗೆ ನಟ ದರ್ಶನ್ ವಿವಾದಾತ್ಮಕ ಹೇಳಿಕೆಗೆ ಸ್ಷಷ್ಟನೆ ನೀಡಬೇಕು.ಮಹಿಳಾ ಆಯೋಗದಿಂದ ಸೂಚನೆ ನೀಡಿದೆ.
ನೋಟಿಸ್ನಲ್ಲಿ ಏನಿದೆ..?
ಶ್ರೀರಂಗಪಟ್ಟಣದಲ್ಲಿ ನಡೆದ 25ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾರ್ವಜನಿಕ ಸಭೆಯಲ್ಲಿ, ಹೆಣ್ಣು ಮಕ್ಕಳ ಕುರಿತು ಮಾತನಾಡಿರುವ ಬಗ್ಗೆ ಈ ದೂರಿನಲ್ಲಿರುವ ಅಂಶಗಳ ಕುರಿತು, ತಾವು ಈ ಪತ್ರ ತಲುಪಿದ ಒಂದು ವಾರದೊಳಗಾಗಿ ಆಯೋಗಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧಿನಿಯಮ 1995 ಕಲಂ 10ರನ್ವಯ ವಿವರಣೆಯನ್ನು ನೀಡತಕ್ಕದ್ದು ಎಂಬ ಮಾಹಿತಿ ಇದೆ.