Friday, May 17, 2024

ಸಿದ್ದಗಂಗಾ ಶ್ರೀಗಳು ಈಗ ಹೇಳುತ್ತಿದ್ದಾರೆ, ಮೊದಲು ಹೇಳಿದ್ರಾ? : ಸಿದ್ದರಾಮಯ್ಯ

ಹಾಸನ : ಸಿದ್ದಗಂಗಾ ಶ್ರೀಗಳು ಈಗ ಹೇಳುತ್ತಿದ್ದಾರೆ, ಮೊದಲು ಹೇಳಿದ್ರಾ? ಜಾತಿಗಣತಿ ವರದಿಯಲ್ಲಿ ಏನಿದೆ ಅಂತ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರ ಅಭಿಪ್ರಾಯವನ್ನು ಕೇಳಿ ವರದಿ ಮಾಡಿದ್ದೇವೆ ಅಂತ ಹೇಳ್ತಾರೆ, ಅದು ನನಗೆ ಗೊತ್ತಿಲ್ಲ. ಜಯಪ್ರಕಾಶ್ ಹೆಗ್ಡೆ ಅವರು ಅಧ್ಯಕ್ಷರಲ್ಲವಾ? ಅವರು ಕೊಟ್ಟಿದ್ದಾರೆ, ನಾವು ತೆಗೆದುಕೊಂಡಿದ್ದೇವೆ ಅಷ್ಟೇ ಎಂದು ತಿಳಿಸಿದರು.

ಕಾಂತರಾಜು ಅವರ ಜಾತಿಗಣತಿಗೆ ಹಲವರ ವಿರೋಧ ವಿಚಾರವಾಗಿ ಮಾತನಾಡಿ, ನಾವು ರಿಪೋರ್ಟ್‌ಅನ್ನು ಈಗ ತೆಗೆದುಕೊಂಡಿದ್ದೇವೆ. ರಿಪೋರ್ಟ್‌ನಲ್ಲಿ ಏನಿದೆ ಅಂತ ಗೊತ್ತಿಲ್ಲ. ಕ್ಯಾಬಿನೆಟ್‌ ಮುಂದೆ ಮಂಡಿಸಿ, ಅದರಲ್ಲಿ ಏನಿದೆ ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಒಬ್ಬರು ಕಾಂಗ್ರೆಸ್​ಗೆ ವೋಟು ಹಾಕಿದ್ರು

ಬಿಜೆಪಿ ನಿಯೋಗ ರಾಜ್ಯಪಾಲರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯಿಂದ ಇಬ್ಬರು, ಒಬ್ಬರು ಕಾಂಗ್ರೆಸ್​ಗೆ ವೋಟು ಹಾಕಿದ್ರು. ಇನ್ನೊಬ್ಬರು ಗೈರು ಆಗಿದ್ದರು. ಅದನ್ನು ಮುಚ್ಚಿ ಹಾಕಲು ಇದನ್ನು ಮಾಡ್ತಿದ್ದಾರೆ ಅಷ್ಟೇ ಎಂದು ಕುಟುಕಿದರು.

ಅವರ ಅನೈತಿಕ ಮೈತ್ರಿಯನ್ನು ಜನ‌ ಒಪ್ಪಲ್ಲ

ಅವರಿಗೆ ಎಲ್ಲಾ ಎಂಎಲ್‌ಎ‌ಗಳನ್ನು ಒಗ್ಗಟ್ಟಾಗಿ ಇಟ್ಟುಕೊಳ್ಳಲು ಆಗಲಿಲ್ಲ. ಅದಕ್ಕೆ ಇದನ್ನು ಮಾಡ್ತಾ ಇದ್ದಾರೆ. ಅವರ ಅನೈತಿಕ ಮೈತ್ರಿಯನ್ನು ಜನ‌ ಒಪ್ಪಲ್ಲ. ಇದುವರೆಗೂ ಜೆಡಿಎಸ್‌ನವರು ಏನು ಹೇಳುತ್ತಿದ್ದರು. ಯಾವುದೇ ಕಾರಣಕ್ಕೂ ಕೋಮುವಾದಿಗಳ‌ ಜೊತೆ ಹೋಗಲ್ಲ ಅಂತ, ಈಗ ಯಾಕೆ ಹೋದರು? ಎಂದು ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES