ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರೇ, ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಆ ಎಲ್ಲ ದೇಶದ್ರೋಹಿಗಳನ್ನು ಕೂಡಲೇ ಬಂಧಿಸಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಘೋಷಣೆ ಕೂಗಿದವರನ್ನು ಬಂಧಿಸಿ, ಘಟನೆಯ ಕೂಲಂಕಷ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಸದಾ ದೇಶದ್ರೋಹಿಗಳನ್ನು ಪೊರೆಯುವ ಪಕ್ಷ. ಇಂದು ಆ ವಿಷಜಂತುಗಳನ್ನು ವಿಧಾನಸೌಧದ ಆವರಣದೊಳಗೆ ಬರುವಷ್ಟು ಓಲೈಕೆ ಮಾಡಿದೆ ಎಂದು ಕಿಡಿಕಾರಿದ್ದಾರೆ.
ವಿಧಾನಸೌಧದ ಆವರಣದಲ್ಲೇ ಶತ್ರು ಪಾಕಿಸ್ತಾನದ ಪರ ಕಾಂಗ್ರೆಸ್ ಪಕ್ಷದ ನಾಸಿರ್ ಬೆಂಬಲಿಗರು ಘೋಷಣೆ ಕೂಗಿದ್ದಾರೆ. ಈ ಮೂಲಕ ನಮಗ್ಯಾವ ಭಯವಿಲ್ಲ ಎಂದು ಸಾರಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಈ ಘಟನೆ ಜ್ವಲಂತ ಸಾಕ್ಷಿ ಎಂದು ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಸದಾ ದೇಶದ್ರೋಹಿಗಳನ್ನು ಪೊರೆಯುವ ಕಾಂಗ್ರೆಸ್ ಪಕ್ಷ ಇಂದು ಆ ವಿಷಜಂತುಗಳನ್ನು ವಿಧಾನಸೌಧದ ಆವರಣದೊಳಗೆ ಬರುವಷ್ಟು ಓಲೈಕೆ ಮಾಡಿದೆ.
ವಿಧಾನಸೌಧದ ಆವರಣದಲ್ಲೇ ಶತ್ರು ಪಾಕಿಸ್ತಾನದ ಪರ ಘೋಷಣೆ ಕೂಗಿದ ಕಾಂಗ್ರೆಸ್ ಪಕ್ಷದ ನಾಸಿರ್ ಬೆಂಬಲಿಗರು, ನಮಗ್ಯಾವ ಭಯವಿಲ್ಲ ಎಂದು ಸಾರಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಈ ಘಟನೆ… pic.twitter.com/szQedimtdU
— Nalinkumar Kateel (@nalinkateel) February 27, 2024